ಮುಂಡಗೋಡ : ಯಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೇಟ್ ನೀಡಬೇಕೆಂದು ಯುವ ಕಾಂಗ್ರೆಸ್ ಮುಖಂಡ, ಉದ್ಯಮಿ ಲಕ್ಷ್ಮಣ ಬನಸೋಡೆ ಮುಂಡಗೋಡ ತಾಲೂಕಾ ಬ್ಲಾಕ್ ಅಧ್ಯಕ್ಷ ಕೃಷ್ಣ ಹಿರಳ್ಳಿ ಅವರಿಗೆ ಮನವಿ ಅರ್ಪಿಸಿದ್ದಾರೆ.
ತಮಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಬಿ.ಫಾರ್ಮ್ನೀಡಬೇಕು. ತಾವು ಸ್ಪರ್ಧಿಸಿದರೆ ಗೆಲವು ನಿಶ್ಚಿತ. ಯಲ್ಲಾಪುರ ಕ್ಷೇತ್ರದಲ್ಲಿ ಮತದಾರರು ಕಾಂಗ್ರೆಸ್ ಪರ ಹೆಚ್ಚಿನ ಒಲವು ತೋರುತ್ತಿದ್ದಾರೆ ಅಲ್ಲದೆ ಪಕ್ಷದ ಪರ ಹೆಚ್ಚಿನ ಮತಗಳನ್ನು ಹೊಂದಿದೆ. ಜನಪರ ಕಾಳಜಿ ಉಳ್ಳನನಗೆ ಎಲ್ಲ ಜನಾಂಗದವರ ಒಲವು ಇದೆ.
ಯಲ್ಲಾಪುರ ಕ್ಷೇತ್ರವು ಗೆಲುವು ಸಾಧಿಸಲು ಮುಖ್ಯ ಕೇಂದ್ರವಾಗಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ನನ್ನದೇ ಆದ ಶಕ್ತಿಯಿಂದ ಮತ್ತು ಕಾಂಗ್ರೆಸ್ ಪಕ್ಷದ ಮತಗಳನ್ನು ಪಡೆದು ಸುಮಾರು 90 ರಿಂದ ಒಂದು ಲಕ್ಷ ಮತಗಳಿಗಿಂತ ಹೆಚ್ಚು ಮತಗಳನ್ನು ಪಡೆಯುವುದರ ಜೊತೆಗೆ ಜಯಗಳಿಸುತ್ತೇನೆ ಎಂಬ ದೃಢ ವಿಶ್ವಾಸ ನನಗಿದೆ. ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಸಮಾಜ ಸೇವೆಯನ್ನೇ ಮೈಗೂಡಿಸಿಕೊಂಡು ಸಾರ್ವಜನಿಕ ಸೇವೆಗೆ ಧಾರ್ಮಿಕ ಸಂಘಟನೆ, ಸರ್ವಧರ್ಮ ಸಮಾನತೆಗಾಗಿ ನನ್ನ ಶ್ರಮವನ್ನೇ ಮುಡಿಪಾಗಿಟ್ಟಿದ್ದೇನೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.