ಕುಂದಾಪುರ, ಜೂನ್ ೨೪: ಇಲ್ಲಿಗೆ ಸಮೀಪದ ತ್ರಾಸಿ ಬಳಿ ಸಂಭವಿಸಿದ ರಾಜ್ಯವನ್ನೇ ನಡುಗಿಸಿದ ಶಾಲಾ ವ್ಯಾನ ದುರಂತದಲ್ಲಿ 8 ಮಕ್ಕಳು ಸಾವನ್ನಪ್ಪಿದ್ದರೂ ಪಾಲಕರು ಮಾತ್ರ ಇನ್ನು ಎಚ್ಚತ್ತುಕೊಂಡಿಲ್ಲ.ಶಾಲೆಯ ಆಡಳಿತ ಮಂಡಳಿಗಳಿಗೆ ಮಕ್ಕಳ ಫೀಸ್ ಬೇಕು ಜವಾಬ್ದಾರಿ ಬೇಡ ಎನ್ನುವಂತೆ ವರ್ತನೆಯ ಮುಂದೆ ಕರಾವಳಿಯ ದುರಂತದ ಯಾವ ಪರಿಣಾಮವೂ ಇಲ್ಲಿ ಬೀರಿದಿರುವದು ದುರಾದೃಷ್ಟಕರ.
ಘಟನೆ ನಡೆದು ಕೆಲವು ಘಂಟೆಗಳು ಕಳೆಯುವ ಮುನ್ನವೆ ಇಲ್ಲೊರ್ವ ಚಾಲಕ ಕ್ಲಾಸರೂಮ್ ತುಂಬುವಷ್ಟು ಪುಟಾಣಿ ವಿದ್ಯಾರ್ಥಿಗಳನ್ನು ಒಮಿನಿಯಲ್ಲಿ ತುಂಬಿಕೊಂಡಿದ್ದಾನೆ. ಮಕ್ಕಳನ್ನು ಕರೆಯಲು ಮನೆಮನೆಗೂ ತೆರಳಿದಾಗ. ಸ್ವತಃ ಪಾಲಕರೆ ಬಂದು ತುಂಬಿದ ವಾಹನದಲ್ಲಿ ತನ್ನದೊಂದು ಪಾಲು ಕೊಟ್ಟು ಟಾಟಾ ಬೈ ಎಂದು ಹೇಳಿದ್ದಾರೆ. ಇಲ್ಲಿ ಪ್ರತಿದಿನ ಒಂದೆ ಓಮಿನಿಯಲ್ಲಿ 30 ವಿದ್ಯಾರ್ಥಿಗಳು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಶಾಲೆಗೆ ಪ್ರಯಾಣ ನಡೆಸುತ್ತಿದೆ. ಈ ಪೈಪೋಟಿಯಲ್ಲಿ ಅಟೋ ರಿಕ್ಷಾಗಳೂ ಹಿಂದೆ ಬಿದ್ದಿಲ್ಲ. ಇವರಿಗೆ ಶಾಲಾ ಆಡಳಿತ ಮಂಡಳಿ, ಪೊಲೀಸ್ ಇಲಾಖೆ ಸಂಬಂದಿಸಿದ ಅಧಿಕಾರಿಗಳ ಭಯವಂತೂ ಇಲ್ಲ. ಹೋಗಲಿ ಮಕ್ಕಳ ಜೀವದ ಕಾಳಜಿಯೂ ಇಲ್ಲವಲ್ಲ ಎನ್ನುವದು ವಿಷಾದ. ನಿಯಮ ಮೀರಿ ಮಕ್ಕಳ್ಳಿದ್ದ ವಾಹನ ಅಫಘಾತಕ್ಕೀಡಾದರೆ ಇವರಿಗೆ ವಿಮೆಯೋ ದೊರಕಲ್ಲ ಎನ್ನು ಜ್ಞಾನವೂ ಇಲ್ಲ.
ಬುಧವಾರ ಬೆಳಿಗ್ಗೆ ಓಮಿನಿಯೊಂದರಲ್ಲಿ ಕ್ಲಾಸರೂಮ್ ತುಂಬುವಷ್ಟು(30) ಮಕ್ಕಳನ್ನು ಸರಕುಗಳಂತೆ ತುಂಬಿಕೊಂಡು ಶಾಲೆಗೆ ಕರೆದೊಯ್ಯುಲಾಗುತ್ತಿತ್ತು. ಸಂಬಂದ ಪಟ್ಟ ಪ್ರಾಧಿಕಾರದ ಪರವಾನಿಗೆ, ಪಾಸ ಹೊಂದದೆ ಇರುವದು ಪೊಲೀಸ್ ತಪಾಸಣೆ ವೇಳೆ ಬೆಳಕಿಗೆ ಬಂದಿದೆ. ಅಲ್ಲದೆ ಸಮಯಕ್ಕೆ ಸರಿಯಾಗಿ ಶಾಲೆಗೆ ತಲುಪಿಸಬೇಕು ಎನ್ನುವ ಧಾವಂತದಿಂದ ಅತಿವೇಗ ಮತ್ತು ನಿರ್ಲಕ್ಷ್ಯತನದಿಂದ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದ ಮುರ್ಡೇಶ್ವರದ ಮಾವಳ್ಳಿ 2 ಪಂಚಾಯಿತಿ ವ್ಯಾಪ್ತಿಯ ನಾಗೇಶ ಮಾಸ್ತಪ್ಪ ನಾಯ್ಕ ಇವರನ್ನು ನಗರ ವೃತ್ತ ನಿರೀಕ್ಷಕ ಪ್ರಶಾಂತ ನಾಯಕ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಕುಂದಾಪುರದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 8 ಮಕ್ಕಳು ಬಲಿಯಾಗಿದ್ದಾರೆ. ಅವಘಡ ನಡೆಯುವ ಮುನ್ನವೆ ಎಚ್ಚೆತ್ತುಕೊಳ್ಳಬೇಕು. ಇನ್ನು ಮುಂದೆ ಅಟೋ ರಿಕ್ಷಾಗಳಾಗಲಿ, ಮಕ್ಕಳನ್ನು ಸಾಗಿಸುವ ಯಾವುದೆ ವಾಹನಗಳಾಗಲಿ ನಿಯಮಬಾಹಿರವಾಗಿ ಮಕ್ಕಳನ್ನು ಕರೆದುಕೊಂಡು ಹೋಗುವುದು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಲಾಗುವದು. ಪದೇ ಪದೇ ನಿಯಮ ಉಲ್ಲಂಘಿಸಿದರೆ ಪರವಾನಿಗೆ ರದ್ದು ಪಡಿಸುವಂತಹ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವೃತ್ತ ನಿರೀಕ್ಷಕರಾದ ಪ್ರಶಾಂತ ನಾಯಕ, ಹೇಳಿದ್ದಾರೆ.