ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಕುಂದಾಪುರ ತಾಲೂಕಿನ ವಿದ್ಯಾರ್ಥಿಗಳನ್ನು ನಮ್ಮ ನಾಡ ಒಕ್ಕೂಟ ಕುಂದಾಪುರ ತಾಲೂಕು ಘಟಕದ ವತಿಯಿಂದ ಸನ್ಮಾನ

Source: SO News | By Laxmi Tanaya | Published on 8th September 2021, 8:23 AM | Coastal News |

ಕುಂದಾಪುರ : ನಮ್ಮ ನಾಡು ಒಕ್ಕೂಟ ಕುಂದಾಪುರ ಘಟಕದಿಂದ ಕುಂದಾಪುರ ತಾಲೂಕಿನ ಪಿಯುಸಿ ಹಾಗೂ  ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ 17 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಮಂಗಳವಾರ ನಗರದ  ಹೋಟೆಲ್ ವಿನಾಯಕ ಗ್ರ್ಯಾಂಡ್  ಅಧ್ಯಕ್ಷರಾದ ಎಸ್. ದಸ್ತಗೀರ್ ಸಾಹೇಬ್ ಕಂಡ್ಲೂರು ಇವರ ಅಧ್ಯಕ್ಷತೆಯಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. 

 ಸನ್ಮಾನಿಸಲ್ಪಟ್ಟ ಪಿಯುಸಿ ವಿದ್ಯಾರ್ಥಿಗಳು:
ಆಫ್ರಿದಿ (100%) ರಿದಾ ಮೊಮಿನ್ (98.33%) ಖತೀಬ್ ಮೆಹಕ್ (95.66%) ಸಫ್ನಾಝ್ (94.33%) ಆಯಿಶಾ ಮೆಹಕ್ (90.66%)

ಸನ್ಮಾನಿಸಲ್ಪಟ್ಟ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು:
ನಿಮ್ರಾ ಶಿಫಾ (98.72%) ಅಝ್ಕಾ ಅನಮ್ (97.44%) ಫವಾಝ್ ಅಹ್ಮದ್ ಆಲಮ್ (96.48%) ಸಾನಿಯಾ (94.72%) ಮುಹಮ್ಮದ್ ನುಝೈಫ್ (94.56%) ಆಯಿಶಾ ಸರ್ವಾ ಎಮ್. ಹೆಚ್. (94.24%) ಸೆಹ್ರಿಶ್ ಸಯ್ಯದ್ (93.12%) ಮುಹಮ್ಮದ್ ಅರ್ಮಾನ್ (92.48%) ಮುಹಮ್ಮದ್ ಬಾಸಿಮ್ (92.32%) ಖಾಝಿ ರಮ್ಲಾ (90.72%) ಮುಹಮ್ಮದ್ ಅಶ್ಹಾಝ್ (90.72%) ಅಕ್ಸಾ ಮೆಹ್ವಿಶ್ (90.24%)

ಕುರ್ ಆನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ತಾಲೂಕು ಕಾರ್ಯದರ್ಶಿ ಸಯ್ಯದ್ ಯಾಸೀನ್ ಹೆಮ್ಮಾಡಿ ಸ್ವಾಗತ ಮತ್ತು ನಿರೂಪಣೆಯನ್ನು ಮಾಡಿದರು. ಸೆಂಟ್ರಲ್ ಕಮಿಟಿ ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿಯ, ಉಡುಪಿ ಜಿಲ್ಲಾಧ್ಯಕ್ಷರಾದ ಮುಷ್ತಾಕ್ ಅಹ್ಮದ್ ಬೆಳ್ವೆ, ಜಿಲ್ಲಾ ಉಪಾಧ್ಯಕ್ಷರಾದ ಮುಜಾವರ್ ಅಬು ಮುಹಮ್ಮದ್ ಕುಂದಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೌ/ ಝಮೀರ್ ಅಹ್ಮದ್ ರಶಾದಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. 

ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಸಮನ್ವಯ ಸಮಿತಿ ಉಡುಪಿ ಜಿಲ್ಲಾಧ್ಯಕ್ಷರಾದ ಅಬ್ದುಸ್ಸಲಾಮ್ ಚಿತ್ತೋರ್, ಎನ್.ಎನ್.ಓ ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಮನ್ಸೂರ್ ಇಬ್ರಾಹಿಮ್ ಮರವಂತೆ, ಜಿಲ್ಲಾ ಸಮಿತಿ ಸದಸ್ಯರಾದ ಶಾಬಾನ್ ಹಂಗಳೂರು, ಹಾಫಿಝ್ ಫಝಲ್ ಕಂಡ್ಲೂರು, ಅನ್ಸಾರ್ ಹೊಸಂಗಡಿ, ಝೈನುಲ್ ಆಬಿದೀನ್ ಹಳಗೇರಿ, ಅಬ್ದುಲ್ ಖಾದರ್ ಮೂಡಗೋಪಾಡಿ, ಜಿಲ್ಲಾ ಯುವ ಘಟಕದ ಮುಜಾಹಿದ್ ನಾಖುದಾ, ಎನ್.ಎಸ್.ಯು.ಐ. ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಯ್ಯದ್ ಫುರ್ಕಾನ್ ಯಾಸೀನ್ ಹಾಗೂ ಇತರರು ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...