ಐಸ್‌ಕ್ಯಾಂಡಿ ಸೇವಿಸಿ ಐವತ್ತೂ ಹೆಚ್ಚು ಮಕ್ಕಳು ಅಸ್ವಸ್ಥ

Source: so news | By MV Bhatkal | Published on 26th March 2019, 12:36 AM | Coastal News | Don't Miss |

 

ಕುಂದಾಪುರ:ಐಸ್ ಕ್ಯಾಂಡಿ ಸೇವಿಸಿದ ಐವತ್ತಕ್ಕೂ ಹೆಚ್ಚು ಮಕ್ಕಳಿಗೆ ಫುಡ್ ಪಾಯಿಸನ್ ಆಗಿ ಆಸ್ಪತ್ರೆಗೆ ದಾಖಲಾದ ಘಟನೆ ಭಾನುವಾರ ತಡ ರಾತ್ರಿ ಕುಂದಾಪುರ ತಾಲೂಕಿನ ಬೆಳ್ವೆ, ಹೆಂಗವಳ್ಳಿ, ಹೈಕಾಡಿ, ಹಾಲಾಡಿ ಬಿದ್ಕಲ್‌ಕಟ್ಟೆ ಹಾಗೂ ತೊಂಬತ್ತು ಮೊದಲಾದ ಪ್ರದೇಶಗಳಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಗಂಭೀರಗೊಂಡ ಸುಮಾರು ಮೂವತ್ತಕ್ಕೂ ಮಿಕ್ಕಿದ ಮಕ್ಕಳನ್ನು ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಹಾಲಾಡಿಯ ಖಾಸಗೀ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ತೊಂಬತ್ತು ನಿವಾಸಿಗಳಾದ ಸಾತ್ವಿಕ್ (8), ಕೃತಿಕಾ (11), ದಿಶಾ(3.5) ತಾಯಿ ಜ್ಯೋತಿ (32), ಭುವನ್ (2.5) ತಾಯಿ ಲಕ್ಷ್ಮೀ(26), ಆಶಾ(8), ಪವಿತ್ರಾ(13), ಹಾಗೂ ಮದ್ವಿತಿ(5) ಕುಂದಾಪುರದ ಸರ್ಕಾರೀ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸೋಮವಾರ ಮಧ್ಯಾಹ್ನ ದಾಖಲಿಸಲಾಗಿದೆ.

ಘಟನೆಯ ವಿವರ: ಶನಿವಾರ ಹಾಗೂ ಭಾನುವಾರ ಹಿಂದಿ ಮಾತಾನಾಡುತ್ತಿದ್ದ ಸುಮಾರು ೪೦ ವರ್ಷ ಪ್ರಾಯದ ವ್ಯಕ್ತಿಯೊಬ್ಬ  ಬೈಕಿನಲ್ಲಿ ಐಸ್ ಕ್ಯಾಂಡಿ ಮಾರಲು ಬಂದಿದ್ದ. ಈತ ಪ್ರತೀ ವಾರವೂ ಈ ಭಾಗದಲ್ಲಿ ಐಸ್ ಕ್ಯಾಂಡಿ ಮಾರುತ್ತಿದ್ದ ಎನ್ನಲಾಗಿದ್ದು, ಭಾನುವಾರ ರಜೆಯಾಗಿದ್ದರಿಂದ ಮಕ್ಕಳ ಜೊತೆಗೆ ಮನೆಯವರೂ ಐಸ್ ಕ್ಯಾಂಡಿ ಖರೀದಿಸಿದ್ದರು ಎನ್ನಲಾಗಿದೆ. ಭಾನುವಾರ ತಡ ರಾತ್ರಿ ಸುಮಾರು ೧.೩೦ಕ್ಕೆ ಐಸ್ ಕ್ಯಾಂಡಿ ತಿಂದ ಮಕ್ಕಳು ವಾಂತಿ ಮಾಡಲಾರಂಭಿಸಿದ್ದು, ವಾಂತಿ ನಿಲ್ಲದೇ ಇದ್ದುದರಿಂದ ರಾತ್ರಿ ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಬಳಿಕ ಸೋಮವಾರ ಬೆಳಿಗ್ಗೆ ಹಾಲಾಡಿ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಯಿತು. 
ಮಾಹಿತಿಯ ಪ್ರಕಾರ ಹಾಲಾಡಿ ಹಾಗೂ ಬೆಳ್ವೆಯಲ್ಲಿ ಐವತ್ತೆಂಟು ಮಕ್ಕಳು ಹಾಗೂ ತಾಯಂದಿರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಇನ್ನೂ ಹಲವು ಮಕ್ಕಳಿಗೆ ವಾಂತಿ ಕಾಣಿಸಿಕೊಂಡು ಅಸ್ವಸ್ಥರಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ. 
ಹಲವೆಡೆ ಪ್ರಕರಣಗಳು ಬೆಳಕಿಗೆ ಬಮದಿದ್ದು, ಓರ್ವನೇ ವ್ಯಕ್ತಿ ಮಾರಾಟ ಮಾಡಿರಲು ಸಾಧ್ಯವಿಲ್ಲ ಎನ್ನಲಾಗಿದೆ. ಕನ್ನಡ ಗೊತ್ತಿಲ್ಲದ ವ್ಯಕ್ತಿಗಳು ಸ್ಥಲೀಯವಾಗಿ ಕ್ಯಾಂಡಿ ತಯಾರಿಸಿ ಗ್ರಾಮಿಣ ಭಾಗದಲ್ಲಿ ವಿತರಿಸುತ್ತಿದ್ದಾರೆ ಎನ್ನಲಾಗಿದ್ದು, ಕ್ಯಾಂಡಿ ಮಾರುವವರು ನಾಲ್ಕೈದು ಜನರ ಗುಂಪು ಇದೆ ಎನ್ನಲಾಗಿದೆ. ಕ್ಯಾಂಡಿ ಸರಬರಾಜು ಮಾಡುವ ಪೆಟ್ಟಿಗೆಯಲ್ಲಿ ಯಾವುದೇ ಹೆಸರಾಗಲೀ ಗುರುತಾಗಲೀ ಇಲ್ಲ ಎನ್ನಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ಬಗ್ಗೆ ಕುಂದಾಪುರ ತಾಲೂಕು ಆರೋಗ್ಯ ಅಧಿಕಾರಿ ಡಾ. ನಾಗಭೂಷಣ ಆಸ್ಪತ್ರೆಗಳಿಗೆ ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...