ಭಟ್ಕಳ : ಭಟ್ಕಳದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಆಸರಕೇರಿ ನಿಚ್ಚಲಮಕ್ಕಿ ಶ್ರೀ ವೆಂಕಟ್ರಮಣ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಕೃಷ್ಣ ನಾಗಪ್ಪ ನಾಯ್ಕ ಆಸರಕೇರಿ, ಉಪಾಧ್ಯಕ್ಷರಾಗಿ ಭವಾನಿ ಶಂಕರ ನಾಯ್ಕ, ಪ್ರಧಾನ ಕಾರ್ಯದರ್ಶಿಯಾಗಿ ನ್ಯಾಯವಾದಿ ಎಂ ಜೆ ನಾಯ್ಕ ಆಯ್ಕೆಯಾಗಿದ್ದಾರೆ.
ದೇವಸ್ಥಾನದ ಸಭಾಭವನದಲ್ಲಿ ಹೊಸ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆ ನಡೆಯಿತು. ಗೋವಿಂದ ನಾಯ್ಕ ಹನುಮಾನ ನಗರ, ಗಿರೀಶ ನಾಯ್ಕ, ಸುರೇಶ್ ವಾಸು ನಾಯ್ಕ, ರಾಮಾ ನಾಯ್ಕ ಬೆಳಕೆ, ಶ್ರೀಧರ ವೆಂಕಟ್ರಮಣ ನಾಯ್ಕ, ಶನಿಯಾರ ನಾಯ್ಕ ಯಲ್ವಡಿಕವೂರು, ವೆಂಕಟ್ರಮಣ ನಾಯ್ಕ ತಲಗೋಡು, ಕೃಷ್ಣ ನಾಯ್ಕ ಹೆಬಳೆ, ಚಂದ್ರು ನಾಯ್ಕ ಜಾಲಿ, ಮಂಜುನಾಥ ದೇವಯ್ಯ ನಾಯ್ಕ, ಶಿವರಾಮ ನಾಯ್ಕ ಮುಠ್ಠಳ್ಳಿ, ನಾರಾಯಣ ಕುಪ್ಪಯ್ಯ ನಾಯ್ಕ, ಪರಮೇಶ ನಾಯ್ಕ ಸಬ್ಬತ್ತಿ, ಗಣೇಶ ನಾಯ್ಕ ಆಡಳಿತ ಮಂಡಳಿಯ ಸದಸ್ಯರಾಗಿ ಸ್ಥಾನ ಪಡೆದಿದ್ದಾರೆ.
ಜಾಲಿ ವ್ಯವಸಾಯ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕ ಶಾಂತರಾಮ ನಾಯ್ಕ, ಭಟ್ಕಳ ಪಿಎಲ್ಡಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ವಾಸು ನಾಯ್ಕ ಆಯ್ಕೆ ಪ್ರಕ್ರಿಯೆಯನ್ನು ನಡೆಸಿದರು.