ಮಂಗಳೂರು : ದೇಶದ ರಕ್ಷಣೆ ಉದ್ದೇಶದಿಂದ ಭದ್ರತಾ ವಿಷಯ ಗೌಪ್ಯವಾಗಿರಬೇಕು. ದೇಶದ ಹೀನ ಕೃತ್ಯದಲ್ಲಿ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಭಗೋಸ್ವಾಮಿ ಮಾಡಿದ್ದಾರೆ ಎಂದು ಮಂಗಳೂರನಲ್ಲಿ ಕೆಪಿಸಿಸಿ ವಕ್ತಾರ ಪ್ರಕಾಶ ರಾಠೋಡ್ ಹೇಳಿದ್ದಾರೆ
ದೇಶದ ರಕ್ಷಣೆ ದೇಶದ ಭದ್ರತೆ ಕಾಪಾಡುವುದು ರಕ್ಷಣಾ ಸಚಿವರ ಕರ್ತವ್ಯ.
ಐದು ಜನರ ಕ್ಯಾಬಿನೆಟ್ ಕಮೀಟಿಯಲ್ಲಿ ದೇಶದ ಭದ್ರತೆ ಗೌಪ್ಯವಾಗಿರ ಬೇಕು.
ಆದರೆ ದೇಶದ ಭದ್ರತೆ ವಿಚಾರ ಸೋರಿಕೆ ಆಗಿರುವುದು ನಿಜಕ್ಕೂ ಖಂಡನೀಯ ಎಂದರು.
ದೇಶದ ಹೀನ ಕೃತ್ಯದ ಹೊಣೆಯನ್ನ ನೇರವಾಗಿ ಪ್ರಧಾನ ಮಂತ್ರಿ ಹೊರಬೇಕು.
ವಾಟ್ಸಪ್ ಚಾಟ್ ನೋಡಿದರೆ ಸಂಪೂರ್ಣವಾಗಿ ಅರ್ಥವಾಗುತ್ತೆ
ಇದು ಒಂದು ದೇಶದೋಹ್ರದ ಕೃತ್ಯವೆಂದು ಸ್ಪಷ್ಟವಾಗಿ ಅರ್ಥವಾಗುತ್ತೆ ಪುಲ್ವಾಮ ದಾಳಿಯ ಕೃತ್ಯ ಮೊದಲೇ ನಿರ್ಧಾರವಾಗಿತ್ತಾ ?
ರಾಜಕೀಯ ದುರುದ್ದೇಶದಿಂದ ಈ ದಾಳಿ ನಡೆಸಿದ್ದಾರ ಎಂದು ಪ್ರಶ್ನೆಸಿದ ಅವರು ,
ಅರ್ನಭಗೋಸ್ವಾಮಿಯ ವಾಹಿನಿ TRP ಗಾಗಿ ಈ ಕೃತ್ಯ ನಡೆಸಿದ್ದಾರೆಂಬ ಸಂಶಯ ಬರುತ್ತಿದೆ ಎಂದು ಪ್ರಕಾಶ ರಾಠೋಡ್ ಹೇಳಿದ್ದಾರೆ.