ಕೋಲಾರ ಆ.02: ಕರ್ನಾಟಕ ರಾಜ್ಯ ಉರ್ದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ಕ.ರಾ.ಟ) ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘದ ವತಿಯಿಂದ ನೂತನ ಬಿಇಒ ರಘುನಾಥರೆಡ್ಡಿರವರಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಕೆ.ಎನ್. ಮಂಜುನಾಥ್, ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್, ಜಿಲ್ಲಾ ಗೌರವಾಧ್ಯಕ್ಷ ವೆಂಕಟಶಿವಪ್ಪ, ಶಿಕ್ಷಕರ ಮುಖಂಡ ಶ್ರೀನಿವಾಸಮೂರ್ತಿ, ಉರ್ದು ಸಂಘದ ಜಿಲ್ಲಾ ಕಾರ್ಯದರ್ಶಿ ಸೈಯದ್ ನೂರುದ್ದೀನ್, ರಾಜ್ಯ ಸದಸ್ಯ ನಸರುಲ್ಲಾ ಖಾನ್, ಜಿಲ್ಲಾ ಖಜಾಂಚಿ ಸೈಯದ್ ಅಜ್ಗರ್, ತಾಲ್ಲೂಕು ಅಧ್ಯಕ್ಷ ಅಲೀಂ ಪಾಷ, ಸಮೂಹ ಸಂಪನ್ಮೂಲ ವ್ಯಕ್ತಿಗಳು ಯೂನುಸ್ ಖಾನ್, ಸೈಯದ್ ಅಕಮಲ್, ಸೈಯದ್ ಕದೀರ್, ಉರ್ದು ಮುಖಂಡ ಮೊಹಮದ್ ಸುಹೇಲ್ ಪಾಷ, ಶಿಕ್ಷಣ ಸಂಯೋಜಕ ರವಣಪ್ಪ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ತಿಮ್ಮಸಂದ್ರ ನಾಗರಾಜ್, ದೈಹಿಕ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ನಾಗರಾಜ್ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
(ತಿಮ್ಮಸಂದ್ರ ನಾಗರಾಜ್)
ಬಿ.ಆರ್.ಪಿ. ಕೋಲಾರ
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ