ಕೋಲಾರ,ಆ.15: ನಗರದ ಕೋಟೆ ಪ್ರದೇಶದಲ್ಲಿರುವ ಪಿ.ಎಲ್.ಡಿ ಬ್ಯಾಂಕಿನಲ್ಲಿ 71ನೇ ಸ್ವಾತಂತ್ರ್ಯ ಧಿನಾಚರಣೆಯ ಅಂಗವಾಗಿ ಬ್ಯಾಂಕಿನ ಅಧ್ಯಕ್ಷ ಪಾಪಯ್ಯ ಧ್ವಜಾರೋಹಣವನ್ನು ನರವೇರಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ವಿಟ್ಟಪ್ಪನಹಳ್ಳಿ ವೆಂಕಟೇಶ್, ರಾಜ್ಯ ಭೂ ಬ್ಯಾಂಕಿನ ನಿದೇ ್ಶಕ ಯಲವಾರ ಸೊಣ್ಣೇಗೌಡ, ನಿರ್ದೇಶಕರುಗಳಾದ ಚಂಜಿಮಲೆ ರಮೇಶ್, ಚಿಕ್ಕಹಸಾಳ ಕೃಷ್ಣಪ್ಪ, ತುರಾಂಡಹಳ್ಳಿ ವೆಂಕಟರಾಮಪ್ಪ, ಎ.ಶಿವಕುಮಾರ್, ಕೆ.ಸಿ.ಮಂಜುನಾಥ್, ಬೊಮ್ಮಸಂದ್ರ ಕೃಷ್ಣೇಗೌಡ, ಹನುಮಂತರೆಡ್ಡಿ, ತೊಂಡಾಲ ವೆಂಕಟರಾಮಪ್ಪ, ದೇವರಾಜಮ್ಮ, ಅಕ್ಕೆಮ್ಮ, ಬ್ಯಾಂಕಿನ ಕ್ಷೇತ್ರಾಧಿಕಾರಿ ಶ್ರೀನಿವಾಸ್, ಸಿ.ವೆಂಕಟೇಶಪ್ಪ, ಶೇಖರ್ ಎನ್ ರವರು ಉಪಸ್ಥಿತರಿದ್ದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕಚೇರಿಯಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆ
ಕೋಲಾರ,ಆ.15: ನಗರದ ಹೊರವಲಯದ ಟಮಕದಲ್ಲಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕಚೇರಿಯಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆಂಪರಾಜು ಧ್ವಜಾರೋಹಣವನ್ನು ನರವೇರಿಸಿ ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ಮತ್ತು ಹೋರಾಡಿದ ಮಹನೀಯರನ್ನು ನೆನಪಿಸಿಕೊಂಡು ಅವರ ಹಾದಿಯನ್ನು ನಾವು ಸಹ ಸಾಗಬೇಕೆಂದರು.
ಈ ಸಂದರ್ಭದಲ್ಲಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ.ಡೋಮಿನಿಕ್, ಸುಂದರರಾಜ್ ಅರಸ್, ಉಪನ್ಯಾಸಕ ವರ್ಗ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ