ಕೋಲಾರ ನ.11: ದೇಶದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ದುಡಿಯುತ್ತಿರುವ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕೀಯರು ಖಾಯಂಗೊಳಿಸಬೇಕು ಮತ್ತು ಇತರ ಸೌಲಭ್ಯಗಳನ್ನು ನೀಡಬೆಕೆಂದು ಒತ್ತಾಯಿಸಿ ನವೆಂಬರ್ 11 ರಂದು ದೇಶದ ಎಲ್ಲಾ ಅಂಗನವಾಡಿ ನೌಕರರ ಸಂಘಟನೆಗಳು ಒಟ್ಟಾಗಿ ದೆಹಲಿಯ ಜಂತರ್ಮಂತರ್ ಬಳಿ ರ್ಯಾಲಿ ನಡೆಸಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಯಿತು.
ರ್ಯಾಲಿಗೆ ಬೆಂಬಲ ಸೂಚಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕೀಯರ ಕ್ಷೇಮಾಭಿವೃದ್ಧಿ ಸಮಿತಿಯು ಸಮಿತಿಯ ರಾಜ್ಯ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕಲ್ವಮಂಜಲಿ ಸಿ. ಶಿವಣ್ಣ ನೃತೃತ್ವದಲ್ಲಿ ರ್ಯಾಲಿಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು.
ಸಮಿತಿಯ ಮುಖಂಡರುಗಳಾದ ವಿ. ಮೀನಾಕ್ಷಿ ನಾಗವೇಣಮ್ಮ, ವಿ. ಜಮುನಾರಾಣ , ಎಂ. ಪಾರ್ವತಮ್ಮ, ಹೆಬ್ಬಾಳ ಪದ್ಮಮ್ಮ, ಶಿವಮೊಗ್ಗೆ ಭಾರತಿ, ಮಂಗಳೂರು ಜಯಲಕ್ಷ್ಮಿ ಮತ್ತಿರರಿದ್ದರು.
(ಕಲ್ವಮಂಜಲಿ ಶಿವಣ್ಣ)
ಕೋಲಾರ
ಮೊ. : 9880371159
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ