ಕೋಲಾರ, ಆಗಸ್ಟ್ 11 :ಜಿಲ್ಲಾ ವ್ಯಾಪ್ತಿಯ ಅಗ್ನಿಶಾಮಕ ಠಾಣೆಯಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಕೆ.ಪೂ. ಸ್ವಾಮಿ, ಪಾಪಯ್ಯ, ಜಯರಾಮ್ ಸಿಂಗ್, ಎಂ.ಬಿ.ಮುನಿಯಪ್ಪ, ಎಂ. ವೆಂಕಟೇಶಪ್ಪ ಅವರನ್ನು ವಾಸವಿ ಕ್ಲಬ್ ವತಿಯಿಂಸ ಸನ್ಮಾನಿಸಲಾಯಿತು.
ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಬಿ.ಎಂ.ರಾಘವೇಂದ್ರ, ವಾಸವಿ ಕ್ಲಬ್ ಅಧ್ಯಕ್ಷರಾದ ಸೋಮಶೇಖರ್ ಇದಕ್ಕೆ ಸಾಕ್ಷಿಯಾದರು.
ವೈದ್ಯಾಧಿಕಾರಿ ಹುದ್ದೆಗೆ ಸಂದರ್ಶನ
ಕೋಲಾರ, ಆಗಸ್ಟ್ 11:ಎ.ಆರ್.ಟಿ ಕೇಂದ್ರ, ಎಸ್.ಎನ್.ಆರ್. ಜಿಲ್ಲಾಸ್ಪತ್ರೆಯಲ್ಲಿ 1 ವೈದ್ಯಾಧಿಕಾರಿಗಳ ಹುದ್ದೆ ಖಾಲಿ ಇದ್ದು ಈ ಹುದ್ದೆಗೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ನೇರ ಸಂದರ್ಶನವನ್ನು ದಿನಾಂಕ:19-08-2017 ರಂದು ಬೆಳಗ್ಗೆ 10.30 ಗಂಟೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಹುದ್ದೆಗೆ ಎಂಬಿಬಿಎಸ್ ಅಥವಾ ನಿವೃತ್ತರ ವೈದ್ಯರು ಅರ್ಹರಾಗಿರುತ್ತಾರೆ. 65 ವರ್ಷ ಮೀರಿರಬಾರದು. ತಿಂಗಳಿಗೆ 36 ಸಾವಿರ ರೂಗಳನ್ನು ಗೌರವಧನವನ್ನಾಗಿ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.