ಕೋಲಾರ,ಆ.21: ನ್ಯಾಷನಲ್ ಯೂನಿಕ್ ಪೌಂಡೇಶನ್ ಮತ್ತು ನೇತ್ರದೀಪ್ ಕಣ್ಣಿನ ಆಸ್ಪತ್ರೆ ಕೋಲಾರ ಇವರ ಸಹಯೋಗದಲ್ಲಿ ನಗರದ ಪೂಲ್ಷಾ ಮೊಹಲ್ಲಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಡಿ.ವೈ.ಎಸ್.ಪಿ ಅಬ್ದುಲ್ ಸತ್ತಾರ್ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ ಮನುಷ್ಯನಿಗೆ ಎಲ್ಲಾ ಅಂಗಗಳಿಗಿಂತ ಕಣ್ಣಿನ ಆರೈಕೆ ಬಹಳ ಮುಖ್ಯ. ಅದ್ದರಿಂದ ಕಣ್ಣಿನ ಬಗ್ಗೆ ತುಂಬ ಎಚ್ಚರಿಕೆಯಿಂದ ಇರಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ ಪ್ರಸಾದ್ಬಾಬು, ನಗರಸಭೆ ಸದಸ್ಯ ಚಾನ್ಪಾಷ, ನ್ಯಾಷನಲ್ ಯೂನಿಕ್ ಪೌಂಡೇಶನ್ನ ಅಧ್ಯಕ್ಷ ಇಮ್ರಾನ್ಖಾನ್, ಸದಸ್ಯರು ಭಾಗವಹಿಸಿದ್ದರು.
ಸುಮಾರು 184 ಮಂದಿ ಕಣ್ಣಿನ ತಪಾಸಣೆಗೆ ಒಳಪಟ್ಟಿದ್ದು, ಶಸ್ತ್ರ ಚಿಕಿತ್ಸೆಗೆ 52 ಜನರು ಆಯ್ಕೆಯಾಗಿರುತ್ತಾರೆ.