ಕೋಲಾರ: ಅಕ್ರಮ ಪಡಿತರ ಗೋಧಿ, ರಾಗಿ ಅಕ್ರಮ ದಾಸ್ತಾನು ಹರಾಜು
ಕೋಲಾರ, ಜುಲೈ 24 :ಬಿ.ಎನ್. ರಾಘವೇಂದ್ರ ಬಿನ್ ನಾರಾಯಣ ಶೆಟ್ಟಿರವರ ಅಂಗಡಿ ಮಳಿಗೆಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ ಪಡಿತರ ಗೋಧಿ 458 ಕೆ.ಜಿ ಮತ್ತು ರಾಗಿ 1052 ಕೆ.ಜಿ. ಯನ್ನು ಕರ್ನಾಟಕ ಅಗತ್ಯ ವಸ್ತುಗಳ ಕಾಯ್ದೆ 1955 ರ ಸೆಕ್ಷನ್ 6ಎ ರಂತೆ ದಾಸ್ತಾನನ್ನು ಮುಕ್ತ ಮಾರುಕಟ್ಟೆಯಲ್ಲಿ ಹರಾಜು ಮಾಡಲು ಮಾನ್ಯ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಆದೇಶದಲ್ಲಿ ಆದೇಶಿಸಿರುತ್ತಾರೆ.
ದಿನಾಂಕ 27-07-2017 ರಂದು ಕೋಲಾರದ ಟಿ.ಎ.ಪಿ.ಸಿ.ಎಂ.ಎಸ್. ಸಗಟು ಮಳಿಗೆ, ಅಮ್ಮವಾರಿಪೇಟೆಯಲ್ಲಿ ಮುಕ್ತ ಹರಾಜನ್ನು ಹಮ್ಮಿಕೊಳ್ಳಲಾಗಿದ್ದು, ಎ.ಪಿ.ಎಂ.ಸಿ ಪರವನಗಿದಾರರು ಹರಾಜಿನಲ್ಲಿ ಪಾಲ್ಗೊಳ್ಳಬೇಕೆಂದು ಆಹಾರ ಪರಿವೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಗವಿಕಲರಿಂದ ಅರ್ಜಿ ಅಹ್ವಾನ
ಕೋಲಾರ, ಜುಲೈ 24: 2017-18 ನೇ ಸಾಲಿಗೆ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ವತಿಯಿಂದ “ಆಧಾರ ಯೋಜನೆ” ಯಡಿಯಲ್ಲಿ ಅಂಗವಿಕಲರಿಂದ ಅರ್ಜಿಗಳನ್ನು ಅಹ್ವಾನಿಸಿಲಾಗಿದೆ.
ಅರ್ಜಿ ನಮೂನೆಗಳನ್ನು ತಾಲ್ಲೂಕು ಪಂಚಾಯತಿಗಳಲ್ಲಿರುವ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರು (ಎಂ.ಆರ್.ಡ್ಲೂ.) ಗಳಿಂದ ಪಡೆಯಬಹುದಾಗಿದೆ. ಹಾಗೂ ಇಲಾಖಾ ವೆಬ್ಸೈಟ್ ತಿತಿತಿ.ಜisಚಿbಟeತಿeಟಜಿಚಿಡಿe.ಛಿom ನಲ್ಲಿ ಅರ್ಜಿಗಳನ್ನು ಪಡೆಯಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ತಾಲ್ಲೂಕು ಪಂಚಾಯತಿಯಲ್ಲಿರುವ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರು (ಎಂ.ಆರ್.ಡ್ಲೂ.) ರವರಿಗೆ ಸಲ್ಲಿಸುವುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-08-2017 ಆಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ 08152-228250, 9164088120, 8904317589, 8095024543, 9916952966, 8711924638 ಸಂಪರ್ಕಿಸಬಹುದಾಗಿದೆ.