ಕೊಡಗು: ತಲಕಾವೇರಿಯ ಭೂಕುಸಿತದ ಸ್ಥಳದಲ್ಲಿ ಒಂದು ಮೖತ ದೇಹ ಪತ್ತೆಯಾಗಿದೆ. ಭಾರೀ ಮಳೆ ನಡುವೆಯು ಶನಿವಾರ ಎನ್.ಡಿ.ಆರ್.ಎಫ್. ಕಾಯಾ೯ಚರಣೆ ನಡೆಸಿತ್ತು. ಅರ್ಚಕರ ಕುಟುಂಬದ ಐವರ ಮೖತದೇಹಕ್ಕಾಗಿ ಶೋಧ ಕಾಯ೯ ನಡೆಸಿತ್ತು. ಈ ವೇಳೆ ಐವರ ಪೈಕಿ ಒಬ್ಬರ ಮೖತದೇಹ ಪತ್ತೆಯಾಗಿದೆ.
ಕ್ಷೇತ್ರದ ಪ್ರಧಾನ ಅರ್ಚಕ ಟಿ.ಎಸ್.ನಾರಾಯಣ ಆಚಾರ್ ಅವರ ಸಹೋದರ ಆನಂದತೀಥ೯(86) ಎಂಬವರ ಮೃತ ದೇಹ ಎಂದು ಗುರುತಿಸಲಾಗಿದೆ. ಭಾಗಮಂಡಲ ವ್ಯಾಪ್ತಿಯ ತಲಕಾವೇರಿಯಲ್ಲಿ ಬುಧವಾರ ತಡರಾತ್ರಿ ಸುರಿದ ಮಳೆಗೆ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಒಂದು ಭಾಗ ಜರಿದು ತಲಕಾವೇರಿಯ ದೇವಸ್ಥಾನದ ಅರ್ಚಕರುಗಳ ಎರಡು ಮನೆ ಮೇಲೆ ಬಿದ್ದಿತ್ತು.
ಕ್ಷೇತ್ರದ ಪ್ರಧಾನ ಅರ್ಚಕ ಟಿ.ಎಸ್.ನಾರಾಯಣ ಆಚಾರ್, ಪತ್ನಿ ಶಾಂತಾ, ಸಹೋದರ ಆನಂದತೀಥ೯ ಹಾಗೂ ಇಬ್ಬರು ಅರ್ಚಕರು ನಾಪತ್ತೆಯಾಗಿದ್ದರು. ತಕ್ಷಣಾ ಸ್ಥಳೀಯರಿಂದ ರಕ್ಷಣಾ ಕಾಯಾ೯ಚರಣೆ ನಡೆದಿತ್ತು ಆದರೆ ತೀವ್ರ ಪ್ರಮಾಣದ ಮಣ್ಣು ಬಿದ್ದಿದ್ದರಿಂದ ಇದು ಸಾಧ್ಯವಾಗಿರಲಿಲ್ಲ. ಅಲ್ಲದೇ ಮಳೆ ಕೂಡ ಜೋರಾಗಿ ಸುರಿಯುತ್ತಿದ್ದರಿಂದ ರಕ್ಷಣಾ ಕಾರ್ಯ ನಡೆದಿರಲಿಲ್ಲ.
ತಲಕಾವೇರಿಯಲ್ಲಿ ಗುಡ್ಡ ಕುಸಿತ: ಪ್ರಧಾನ ಅರ್ಚಕರ ಮನೆ ಜಖಂ, ಕುಂಟುಂಬ ಸದಸ್ಯರು ಕಣ್ಮರೆ
ಶನಿವಾರ ರಕ್ಷಣಾ ಕಾರ್ಯಾಚರಣೆಗೆ ಸಜ್ಜಾದ ಎನ್ಡಿಆರ್ಎಫ್ ತಂಡ ಮೃತ ದೇಹ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದೆ. ಎರಡು ದಿನಗಳಿಂದ ರಕ್ಷಣಾ ಕಾರ್ಯ ಸರಿಯಾಗಿ ನಡೆದಿರಲಿಲ್ಲ. ಸದ್ಯ ಶೋಧ ಕಾರ್ಯ ಮುಂದುವರಿದಿದೆ.