ಕಾರವಾರ : ಜಿಲ್ಲಾಸ್ಪತ್ರೆಯಲ್ಲಿ ಗೀತಾ ಬಾನಾವಳಿಕರ ಸಾವಿನ ಪ್ರಕರಣವನ್ನು ನ್ಯಾಯಾಂಗ ತನಿಖೆ ವಹಿಸಬೇಕೆಂದು ಮೀನುಗಾರ ಮುಖಂಡರು ಆಗ್ರಹಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೀನುಗಾರ ಮುಖಂಡರು, ಸರ್ಜನ್ ಡಾ ಶಿವಾನಂದ ಕುಡ್ತಲಕರ ಅವರನ್ನ ಅಮಾನತ್ ಮಾಡುವಂತೆ ಸರ್ಕಾರವನ್ನ ಒತ್ತಾಯಿಸಿದ್ದಾರೆ. ಜಿಲ್ಕಾಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಸಪ್ಟೆಂಬರ್ ಮೂರರಂದು ಬಾಣಂತಿ ಗೀತಾ ಶಿವನಾಥ ಬಾನಾವಳಿಕರ ಸಾವನ್ನಪ್ಪಿದ್ದಾಳೆಂದು ಆರೋಪಿಸಿದ್ದಾರೆ. ಗೀತಾ ಸಾವಾಗಿ
ಹತ್ತು ದಿನವಾಗಿದೆ. ಆದ್ರೆ ಸಂಬಂಧಪಟ್ಟ ಅಧಿಕಾರಿಗಳು ಆಕೆಗೆ ಕೊಟ್ಟ ಇಂಜೆಕ್ಷನ್ ಸಿರಿಂಜ್ ಆಗಲಿ ಸೀಜ್ ಮಾಡಿಲ್ಲ. ಸರ್ಜನ್ ಡಾ ಶಿವಾನಂದ ಕುಡ್ತಲಕರ ಅವರು ಎಂದಿನಂತೆ ಆಸ್ಪತ್ರೆಗೆ ಬಂದು ಹೋಗುತ್ತಿರುವುದರಿಂದ ಸಾಕ್ಷಿ ನಾಶ ಮಾಡುವ ಸಾಧ್ಯತೆ ಇದೆ ಎಂದು ನ್ಯಾಯವಾದಿ ಗಜಾನನ ತಾರೀಕರ ಹೇಳಿದ್ದಾರೆ.
ಜಿಲ್ಲಾಸ್ಪತ್ರೆ ಮುಂದೆ ಉಪವಾಸ ಸತ್ಯಾಗ್ರಹದ ಎಚ್ಚರಿಕೆ.
ಬಾಣಂತಿ ಗೀತಾ ಸಾವನ್ನಪ್ಪಿ ಹತ್ತು ದಿನವಾಗಿದೆ. ಕಾರವಾರ ಜನತೆ ಕೂಡ ಸಾವಿಗೆ ಕಾರಣರಾದ ಡಾ ಶಿವಾನಂದ ಕುಡ್ತಲಕರ ಅವರನ್ನ ಅಮಾನತ್ ಮಾಡುವಂತೆ ಒತ್ತಾಯಿಸಿದ್ದಾರೆ. ಆದ್ರೆ ಇದುವರೆಗೆ ಕ್ರಮವಾಗಿಲ್ಲ ಎಂದು ಮೀನುಗಾರ ಮುಖಂಡ ರಾಜು ತಾಂಡೇಲ ಆರೋಪಿಸಿದ್ದಾರೆ. ಇನ್ನು ಹತ್ತು ದಿನಗಳಲ್ಲಿ ಡಾ. ಶಿವಾನಂದ ಕುಡ್ತಲಕರ ಅವರನ್ನ ಅಮಾನತ್ ಮಾಡಬೇಕು. ಗೀತಾ ಕುಟುಂಬಕ್ಕೆ ನ್ಯಾಯ ಸಿಗುವ ನಿಟ್ಟಿನಲ್ಲಿ ಜಿಲ್ಲಾಸ್ಪತ್ರೆ ಮುಂದೆ ಉಪವಾಸ ಸತ್ಯಾಗ್ರಹ ಮಾಡಲಿದ್ದೇವೆ. ಕಾರವಾರದ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಹೋರಾಟ ನಡೆಸಲಿದ್ದೇವೆಂದು ರಾಜು ತಾಂಡೇಲ ಹೇಳಿದ್ದಾರೆ.