ಮುಂಬೈ ಮತ್ತು ಕುಚುವೇಲಿಗೆ ನಡುವೆ ವಿಶೇಷ ರೈಲು; ಪ್ರಯಾಣಿಕರಿಗೆ ದೀಪಾವಳಿ ಕೊಡುಗೆ

Source: sonews | By Staff Correspondent | Published on 8th October 2017, 12:01 AM | Coastal News | State News | National News | Don't Miss |

ಕಾರವಾರ: ದೀಪಾವಳಿ ಹಬ್ಬದ ಪ್ರಯುಕ್ತ ಮುಂಬೈ ಮತ್ತು ಕುಚುವೇಲಿಗೆ ನಡುವೆ ವಿಶೇಷ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ.
ರೈಲು ಸಂಖ್ಯೆ ೦೧೦೭೯ ವಿಶೇಷ ರೈಲು ಮಂಗಳವಾರ ದಿನಾಂಕ ೧೭-೧೦-೨೦೧೭ ಮತ್ತು ೨೪-೧೦-೨೦೧೭ರಂದು ರಾತ್ರಿ ೧೨.೨೦ಕ್ಕೆ ಮುಂಬೈ ಸಿ‌ಎಸ್‌ಎಂಟಿಯಿಂದ ಹೊರಟು ಮರುದಿನ ಬೆಳಿಗ್ಗೆ ೯ಕ್ಕೆ ಕುಚುವೇಲಿ ತಲುಪಲಿದೆ.
ರೈಲು ಸಂಖ್ಯೆ ೦೧೦೮೦ ಕುಚುವೇಲಿಯಿಂದ ಬುಧವಾರ ದಿನಾಂಕ ೧೮-೧೦-೨೦೧೭ ಮತ್ತು ೨೫-೧೦-೨೦೧೭ರಂದು ಮಧ್ಯಾಹ್ನ ೧೨ಕ್ಕೆ ಹೊರಟು ಮುಂಬೈಗೆ ರಾತ್ರಿ ೧೦.೧೫ಕ್ಕೆ ತಲುಪಲಿದೆ.
ಮುಂಬಯಿ ಮತ್ತು ಕೊಚುವೆಲಿ ನಡುವಿನ ಪ್ರಯಾಣದಲ್ಲಿ ದಾದರ್, ಥಾನೆ, ರೋಹ, ಖೇಡಾ, ಚಿಪ್ಲುನ, ಸಂಗಮೇಶ್ವರ ರೋಡ, ರತ್ನಗಿರಿ, ಕಂಕವಲಿ, ಕುಡ್ಲ, ತಿವಿಮ್, ಮಡಗಾಂವ, ಕಾರವಾರ, ಕುಮಟಾ, ಭಟ್ಕಳ, ಕುಂದಾಪುರ, ಉಡುಪಿ, ಮುಲ್ಕಿ, ಸುರತ್ಕಲ್, ಮಂಗಳೂರು, ಕಾಸರಗೋಡ, ಕನ್ನೂರು, ಥಾಲಸ್ಸೇರಿ, ಕೊಝಿಕ್ಕೊಡೆ, ತಿರೂರು, ಶೊರನೂರು, ತ್ರೀಸೂರ, ಎರ‍್ನಾಕೂಲಮ್ ಪಟ್ಟಣ, ಕೊಟ್ಟಾಯಮ್, ತಿರುವಲಮ್, ಚೆಂಗಾನೂರು,ಕಯಾಂಕುಲಮ್ ಮತ್ತು ಕೊಲ್ಲಮ್  ಮಾರ್ಗದ ಸ್ಥಳಗಳಲ್ಲಿ ನಿಲುಗಡೆಗೊಳ್ಳಲಿವೆ ಎಂದು ಕೊಂಕಣ್ ರೈಲು ಸಾರ್ವಜನಿಕ ಸಂಪರ್ಕ ಮುಖ್ಯ ಅಧಿಕಾರಿ ಎಲ್.ಕೆ ವರ್ಮಾ ತಿಳಿಸಿದ್ದಾರೆ. 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...