ಕಾರವಾರ: ಜ.25 ರಂದು ಪಿಂಚಣಿ ಅದಾಲತ್
ಕಾರವಾರ: ಕಾರವಾರ ವಿಭಾಗೀಯ ಅಂಚೆ ಪಿಂಚಣಿ ಅದಾಲತ್ ಜ.25ರ ಬೆಳಿಗ್ಗೆ 11ಗಂಟೆಗೆ ಕಾರವಾರ ವಿಭಾಗದ ಅಧೀಕ್ಷಕರ ಕಾರ್ಯಾಲಯದಲ್ಲಿ ನಡೆಯಲಿದೆ.
ಕಾರವಾರ ವಿಭಾಗದಲ್ಲಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿರುವ ಪಿಂಚಣಿದಾರರು ಮಾತ್ರ ಅದಾಲತ್ನಲ್ಲಿ ಪಾಲ್ಗೊಳ್ಳಬಹುದು. ಗ್ರಾಮೀಣ ಅಂಚೆ ಸೇವಕರಿಗಾಗಲಿ ಅಥವಾ ಅಂಚೆ ಇಲಾಖೆಯ ಮೂಲಕ ಪಿಂಚಣಿ, ಪಡೆಯುತ್ತಿರುವ ಇತರೆ ನೌಕರರಿಗೆ ಅವಕಾಶವಿರುವುದಿಲ್ಲ. ಪಾಲ್ಗೊಳ್ಳುವ ಅಂಚೆ ಪಿಂಚಣಿದಾರರಿಗೆ ಯಾವುದೇ ಭತ್ಯೆ ಕೊಡಲಾಗುವುದಿಲ್ಲ.
ಅಂಚೆ ಪಿಂಚಣಿದಾರರು ತಮ್ಮ ಸಮಸ್ಯೆಗಳನ್ನು ಲಿಖಿತವಾಗಿ ತಮ್ಮ ಎಲ್ಲಾ ವಿವರ, ವಿಳಾಸ, ಪಿಪಿಒ ನಂಬರ್ ಮತ್ತು ಪಿಂಚಣಿ ಪಡೆದುಕೊಳ್ಳುತ್ತಿರುವ ಅಂಚೆ ಕಚೇರಿ ಇತ್ಯಾದಿ ವಿವರಗಳೊಂದಿಗೆ ಜ.24ರೊಳಗೆ ಕಚೇರಿಗೆ ತಲುಪುವ ಹಾಗೆ ಕಳುಹಿಸುವುದು.
ಕುಂದು ಕೊರತೆಗಳನ್ನು ಪೂರ್ತಿ ವಿವರಗಳ ಸಹಿತ ಈ ಮೇಲ್: [email protected] ಗೆ ಸಲ್ಲಿಸಬಹುದು. ಮೋಬೈಲ್ ನಂಬರ್ ಬರೆದರೆ ಉತ್ತಮವೆಂದು ಕಾರವಾರ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.