ಕಾರವಾರ:ಜಿಲ್ಲಾ ಉಸ್ತುವಾರಿ ಸಚಿವರಿಂದ ಗೌರಿ-ಗಣೇಶ ಹಬ್ಬದ ಸಂದೇಶ
ಕಾರವಾರ ಆಗಸ್ಟ್ 22 : ಗೌರಿ-ಗಣೇಶ ಹಬ್ಬದ ಈ ದಿವ್ಯ ಸಂದರ್ಭದಲ್ಲಿ ನಾಡಿನ ಸಮಸ್ತ ಜನತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಲಭ್ಯ ಸಚಿವರು ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ವಿ.ದೇಶಪಾಂಡೆ ಶುಭಾಶಯ ಕೋರಿದ್ದಾರೆ.
ಗೌರಿ ಮತ್ತು ಗಣೇಶ ಹಬ್ಬವು ಜನರಲ್ಲಿ ಶಾಂತಿ, ಸೌಹಾರ್ದತೆ, ಪ್ರೀತಿ, ವಿಶ್ವಾಸ ಮತ್ತು ಐಶ್ವರ್ಯವನ್ನು ತರಲಿ. ನಿರ್ವಿಘ್ನಕಾರಕನಾದ ಗಣೇಶನು ಎಲ್ಲರಿಗೂ ಸನ್ಮಂಗಳವನ್ನುಂಟುಮಾಡಲಿ.
ನಾಡಿನಲ್ಲಿ ಮಳೆ-ಬೆಳೆ ಇನ್ನಷ್ಟು ಸಮೃದ್ಧವಾಗಿ ಎಲ್ಲರ ಸಮಸ್ಯೆ ಪರಿಹಾರವಾಗುವಂತಾಗಲಿ ಎಂದು ನಾನು ಗೌರಿ-ಗಣೇಶ ಹಬ್ಬದ ಈ ವಿಶೇಷ ಸಂದರ್ಭದಲ್ಲಿ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಅವರು ಶುಭ ಸಂದೇಶದಲ್ಲಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ