ಮುಂಬೈ: ಅತೃಪ್ತ ಶಾಸಕರನ್ನು ಭೇಟಿಯಾಗಿ ಅವರ ಮನವೊಲಿಸುವ ಪ್ರಯತ್ನಕ್ಕೆ ಕೈಹಾಕಿರುವ ಕರ್ನಾಟಕ ಕಾಂಗ್ರೇಸ್ ನ ಚಾಣಕ್ಯ ಡಿ.ಕೆ.ಶಿವಕುಮಾರ ರನ್ನು ಮುಂಬೈ ಪೊಲೀಸರು ಬುಧವಾರ ತಮ್ಮ ವಶಕ್ಕೆ ಪಡೆದುಕೊಂಡಿದ್ದು ರಾಜ್ಯ ರಾಜಕಾರಣದಲ್ಲಿ ತಲ್ಲಣವನ್ನುಂಟು ಮಾಡಿದೆ.
ಮೈತ್ರಿ ಸರ್ಕಾರದಿಂದ ಮುನಿಸಿಕೊಂಡ ಅತೃಪ್ತಶಾಸಕರನ್ನು ಭೇಟಿಯಾಗಲು ಇಲ್ಲಿನ ರಿನೈಸೆನ್ಸ್ ಹೋಟೆಲ್ ಮುಂಭಾಗದಲ್ಲಿ ಸತತ ೬ಗಂಟೆಗಳ ಕಾಲ ಕಾಯುತ್ತಿದ್ದ ಡಿ.ಕೆ.ಶಿ. ಯವರನ್ನು ಮುಂಬೈ ಪೊಲೀಸರು ವಶಪಡಿಸಕೊಂಡಿರುವ ಮಾಹಿತಿ ಲಭ್ಯವಾಗಿದೆ.
ಮೈತ್ರಿ ಸರ್ಕಾರದ ಪತನವನ್ನು ತಡೆಯಲು ಮುಂಬೈಗೆ ತೆರಳಿದ್ದ ಡಿ.ಕೆ.ಶಿ ಶಾಸಕರನ್ನು ಭೇಟಿಯಾಗುವುದಾಗಿ ಹಠ ಹಿಡಿದಿದ್ದರು ಎನ್ನಲಾಗಿದೆ. ಜಿ.ಟಿ.ದೇವೆಗೌಡ ಮತ್ತು ಶಿವಲಿಂಗೇಗೌಡ ಡಿಕೆಶಿ ಜತೆಗಿದ್ದು ಶಾಂತಿಯುತ ಧರಣಿ ಕೈಗೊಂಡಿದ್ದರು. ಏಕಾಏಕಿ ಮುಂಬೈ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿರುವುದು ವಿವಾದವಷ್ಟೆ ಅಲ್ಲದೆ ರಾಜ್ಯರಾಜಕಾರಣದಲ್ಲಿ ತಲ್ಲಣವನ್ನುಂಡು ಮಾಡಿದೆ.