ಕಣ್ಣೂರು: ಕಣ್ಣೂರು ಜಿಲ್ಲೆಯ ಕಣ್ಣವತ್ತ್ ಎಂಬಲ್ಲಿ ಎಸ್ಡಿಪಿಐ ಕಾರ್ಯಕರ್ತನೋರ್ವನನ್ನು ಹತ್ಯೆ ಮಾಡಲಾಗಿದೆ. ಕಣ್ಣವತ್ತ್ ನಿವಾಸಿ ಮುಹಮ್ಮದ್ ಸಲಾಹುದ್ದೀನ್ ಕೊಲೆಗೀಡಾದ ಯುವಕ. ತನ್ನ ಕುಟುoಬದೊಂದಿಗೆ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಬೈಕ್ ನಲ್ಲಿ ತಲುಪಿದ ತಂಡವೊಂದು ಆಕ್ರಮಣ ನಡೆಸಿದೆ.
ಮಂಗಳವಾರ ಸಂಜೆ ಚಿಟ್ಟಾರಿಕ್ಕಡವು ಸಮೀಪದ ಕೊಚ್ಚೇರಿ ಎಂಬಲ್ಲಿ ಘಟನೆ ನಡೆದಿದೆ. ತನ್ನಿಬ್ಬರು ಸಹೋದರಿಯರೊಂದಿಗೆ ಕೂತ್ತು ಪರಂಬದಿಂದ ಕನ್ನವತ್ತಿನ ಮನೆಗೆ ಬರುತ್ತಿದ್ದ ವೇಳೆ ಕಾರಿನ ಹಿಂಬದಿಗೆ ಬೈಕ್ ಢಿಕ್ಕಿ ಹೊಡೆಸಿದ್ದು ಈ ವೇಳೆ ಕಾರಿನಿಂದ ಇಳಿದ ಸಲಾಹುದ್ದೀನ್ ನನ್ನು ಬೈಕ್ ನಲ್ಲಿದ್ದ ಇಬ್ಬರು ತಲವಾರಿನಿಂದ ಯದ್ವಾತದ್ವಾ ಇರಿದಿದ್ದಾರೆ. ಆ ಬಳಿಕ ತಂಡ ಪರಾರಿಯಾಗಿದೆ ಎಂದು ತಿಳಿದುಬಂದಿದೆ.
ಬೊಬ್ಬೆ ಕೇಳಿ ಅಲ್ಲಿಗೆ ತಲುಪಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕುತ್ತಿಗೆಗೆ ಗಂಭೀರ ಗಾಯಗೊಂಡ ಸಲಾಹುದ್ದೀನ್ ರನ್ನು ತಲಶೇರಿ ಜನರಲ್ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಸಾವು ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.