ಕಾರವಾರ: ಜೂ. 28ರಂದು ಅಂಚೆ ಪಿಂಚಣಿ ಅದಾಲತ್

Source: S.O. News service | By S O News | Published on 19th June 2021, 5:48 PM | Coastal News |

ಕಾರವಾರ: ಶಿರಸಿ ವಿಭಾಗೀಯ ಅಂಚೆ ಪಿಂಚಣಿ ಅದಾಲತ್‍ನ್ನು ಜೂ. 28ರಂದು ಮಧ್ಯಾಹ್ನ 11 ಗಂಟೆಗೆ ಶಿರಸಿ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ನಡೆಸಲಾಗುವುದು.

ಶಿರಸಿ ವಿಭಾಗದಲ್ಲಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ಅಂಚೆ ಪಿಂಚಣಿದಾರರು ಮಾತ್ರ ಇದರಲ್ಲಿ ಪಾಲ್ಗೊಳ್ಳಬಹುದು. ಶಿರಸಿ ವಿಭಾಗದಲ್ಲಿ ಸೇವೆಸಲ್ಲಿಸಿದ ಹುದ್ದೆಗಳ ಪಿಂಚಣಿದಾರರ ಕುಂದುಕೊರತರಗಳನ್ನು ಅದಾಲತ್‍ನಲ್ಲಿ ಚರ್ಚಿಸಲಾಗುವುದು. ಈ ಅದಾಲತ್‍ನಲ್ಲಿ ಭಾಗವಹಿಸಿದವರಿಗೆ ಯಾವುದೇ ಭತ್ಯೆಯನ್ನು ಅನುಮತಿಸಲಾಗುವುದಿಲ್ಲ. ಅದಾಲತ್ ಗೆ ಸಂಬಂಧಪಟ್ಟಂತೆ ಯಾರಾದರೂ ದೂರುಗಳನ್ನು ಹೊಂದಿದ್ದರೆ ಅಂಚೆ ಅಥವಾ ಇಮೇಲ್ ಮೂಲಕ ಜೂನ್ 24 ರ ಒಳಗಾಗಿ ಶಿರಸಿ ವಿಭಾಗಿಯ ಅಧೀಕ್ಷಕ ಕಛೇರಿಗೆ ತಲುಪುವ ಹಾಗೆ ಕಳುಹಿಸಬೇಕು.

ಕುಂದು ಕೊರತೆಗಳ ಪೂರ್ತಿ ವಿವರವನ್ನು [email protected] ಮೇಲ್ ವಿಳಾಸಕ್ಕೆ ಸಲ್ಲಿಸಬೇಕು ಎಂದು ಶಿರಸಿ ವಿಭಾಗಿಯ ಅಂಚೆ ಅಧೀಕ್ಷಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next