ಬೆಂಗಳೂರು: ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯು ರಾಜ್ಯ/ಜಿಲ್ಲೆ/ತಾಲ್ಲೂಕು ಗ್ಯಾಸೆಟಿಯರ್ ಸಂಪುಟಗಳನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ರಚಿಸಿ ಪ್ರಕಟಿಸುವ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಜಿಲ್ಲಾ ಹಾಗೂ ತಾಲ್ಲೂಕು ಗ್ಯಾಸೆಟಿಯರ್ ಸಂಪುಟಗಳಲ್ಲಿ ಪ್ರಮುಖವಾಗಿ ಇತಿಹಾಸ, ಅರ್ಥಶಾಸ್ತ್ರ, ಕನ್ನಡ, ವಾಣಿಜ್ಯ ಶಾಸ್ತ್ರ ಹಾಗೂ ರಾಜ್ಯ ಶಾಸ್ತ್ರಕ್ಕೆ ಸಂಬಂಧಿಸಿದ ಅಧ್ಯಾಯಗಳಿದ್ದು ಲೇಖಕರು ಅಧ್ಯಾಯಗಳ ರಚನಾಕಾರ್ಯ ನಿರ್ವಹಿಸಬೇಕಿರುತ್ತದೆ.
ಇಲಾಖೆಯು 2020-21 ನೇ ಸಾಲಿನಲ್ಲಿ 1) ಬೆಂಗಳೂರು ಗ್ರಾಮಾಂತರ, 2) ರಾಮನಗರ, 3)ಚಿಕ್ಕಬಳ್ಳಾಪುರ ಜಿಲ್ಲಾಗ್ಯಾಸೆಟಿಯರ್ ಗಳ ರಚನಾ ಕಾರ್ಯವನ್ನು ಹಮ್ಮಿಕೊಂಡಿದ್ದು, ಈ ಜಿಲ್ಲಾ ಗ್ಯಾಸೆಟಿಯರ್ಗಳ ಅಧ್ಯಾಯಗಳನ್ನು ಸಂಶೋಧನಾ ಕಾರ್ಯದಲ್ಲಿ ಆಸಕ್ತಿಯುಳ್ಳ ಸ್ನಾತಕೋತ್ತರ ಪದವಿಧರರು(ಪಿ.ಹೆಚ್ಡಿ) ಜೊತೆಗೆ ರಚನಾಕಾರ್ಯದಲ್ಲಿ 5 ರಿಂದ 10 ವರ್ಷಗಳ ನಿರಂತರ ಅನುಭವ ಉಳ್ಳ ಹಾಗೂ ಸ್ಥಳೀಯ ಹಿನ್ನಲೆಯುಳ್ಳ ಸಂಪನ್ಮೂಲ ವ್ಯಕ್ತಿಗಳಿಂದ ರಚಿಸಲು ಉದ್ದೇಶಿಸಿದೆ.
ಆಸಕ್ತಿಯುಳ್ಳ ಸ್ನಾತಕೋತ್ತರ ಪದವಿಧರರು(ಪಿ.ಹೆಚ್ಡಿ) ತಾವು ರಚಿಸಿರುವ ಪುಸ್ತಕಗಳ/ ಲೇಖನಗಳೊಂದಿಗೆ ಸ್ವವಿವರವನ್ನು ಈ ಕಚೇರಿಯ ಇ-ಮೇಲ್ ವಿಳಾಸ [email protected] ಕ್ಕೆ 15 ದಿನಗಳೊಳಗಾಗಿ ಸಲ್ಲಿಸತಕ್ಕದ್ದು. ಸಂಪನ್ಮೂಲ ವ್ಯಕ್ತಿಗಳು ರಚಿಸಿರುವ/ಬರೆದಿರುವ ಲೇಖನಗಳು/ಪುಸ್ತಕಗಳು, ವಿಶ್ವವಿದ್ಯಾಲಯಗಳು ಪ್ರಕಟಿಸುವ ಜರ್ನಲ್ಸ್/ಪ್ರಸಾರಂಗಗಳಲ್ಲಿ ಪ್ರಕಟಿತಗೊಂಡಿರುವವರಿಗೆ ಆದ್ಯತೆ ನೀಡಲಾಗುವುದು. ಆಯ್ಕೆಯಾದ ಲೇಖಕರಿಗೆ ಅಧ್ಯಾಯ ರಚನಾ ಕಾರ್ಯದಲ್ಲಿ ಸುಮಾರು 350 ರಿಂದ 400 ಪದಗಳ ಮಿತಿಗೊಳಪಟ್ಟು, ಪುಟ ಒಂದಕ್ಕೆರೂ 750/- ಗಳನ್ನು ಗೌರವ ಸಂಭಾವನೆಯಾಗಿ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಮುಖ್ಯ ಸಂಪಾದಕರು, ಕರ್ನಾಟಕ ಗ್ಯಾಸೆಟಿಯರ್ ಇಲಾಖೆ, ಬೆಂಗಳೂರು ಇವರ ಕಚೇರಿಯ ದೂರವಾಣಿ ಸಂಖ್ಯೆ: 080-22213474 ಮೊ: 9980853108 ಸಂಪರ್ಕಿಸಬಹುದು ಎಂದು ಮುಖ್ಯ ಸಂಪಾದಕರು, ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯ ಪ್ರಕಟಣೆ ತಿಳಿಸಿದೆ.