ನರಗುಂದ: ರಾಜ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಕೊವಿಡ್-19 ಸೋಂಕು ನಿಯಂತ್ರಣ ಕುರಿತ ನರಗುಂದ ತಾಲೂಕಿನ ಅಧಿಕಾರಿಗಳ ಸಭೆ ನಡೆಸಿದರು.
ಕೊವಿಡ್-19 ಸೋಂಕು ಗ್ರಾಮೀಣ ಭಾಗಕ್ಕೂ ವ್ಯಾಪಿಸುತ್ತಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ ವಾರ್ಡ ಮಟ್ಟದಲ್ಲಿ ಈ ಸೋಂಕು ನಿಯಂತ್ರಣಕ್ಕೆ ಜನರು ಕಡ್ಡಾಯವಾಗಿ ಮುಖಕ್ಕೆ ಮಾಸ್ಕ ಧರಿಸುವದು, ಸಾಮಾಜಿಕ ಅಂತರ ಕಾಯ್ದುಕೊಂಡು ಕೈಗಳನ್ನು ಆಗಾಗ ಸ್ವಚ್ಛಗೊಳಿಸುವ ಕುರಿತಂತೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಹೊರ ಜಿಲ್ಲೆಗಳಿಂದ ಆಗಮಿಸುವವರ ಮೇಲೆ ನಿಗಾ ವಹಿಸಬೇಕು. ಸೋಂಕು ದೃಢ ಪಟ್ಟ ಪ್ರಕರಣಗಳಲ್ಲಿ ತಕ್ಷಣ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತ ವ್ಯಕ್ತಿಗಳ ಗಂಟಲು ದ್ರವ ಪರೀಕ್ಷೆ, ಅವರನ್ನು ಪ್ರತ್ಯೇಕವಾಗಿ ಇರಿಸುವ ಕ್ರಮಗಳನ್ನು ಜವಾಬ್ದಾರಿಯಿಂದ ಪಾಲಿಸಬೇಕು ಎಂದು ಸಚಿವರು ನುಡಿದರು.
ತಾಲೂಕಿನ ಕಂಟೇನ್ಮೆಂಟ ಪ್ರದೇಶಗಳ ಜನರ ಅವಶ್ಯಕ ವಸ್ತುಗಳ ಪೂರೈಕೆ, ಸಾಂಸ್ಥಿಕ ದಿಗ್ಭಂಧನದಲ್ಲಿ ಇರುವವರಿಗೆ ಸರಿಯಾದ ಉಟೋಪಹಾರದ ವ್ಯವಸ್ಥೆ ಕುರಿತು ಚರ್ಚಿಸಿದ ಸಚಿವರು, ಒಟ್ಟಾರೆ ತಾಲೂಕಿನ ಕೊವಿಡ್-19 ನಿಯಂತ್ರಣ ಪರಿಣಾಮಕಾರಿಯಾಗಿ ಜರುಗಿಸಲು ಅಧಿಕಾರಿಗಳು ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿ ಸಮರ್ಪಕ ನಿರ್ವಹಣೆ ನಡೆಸಲು ಮತ್ತು ಯಾವುದೇ ಇಲಾಖೆಯ ಕೊವಿಡ್-19 ವಾರಿಯರ್ಸ ಇರಲಿ ಅವರು ತಮ್ಮ ಸುರಕ್ಷತೆಗೂ ಕಡ್ಡಾಯವಾಗಿ ಗಮನ ನೀಡಲು ಸಚಿವರು ಸೂಚಿಸಿದರು.
ಸಭೆಯಲ್ಲಿ ತಾಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ತದನಂತರ ಸಚಿವ ಸಿ.ಸಿ. ಪಾಟೀಲ ತಾಲೂಕಿನಲ್ಲಿ ಕೊವಿಡ್-19 ಸೋಂಕು ಪ್ರಕರಣ ಹೆಚ್ಚಾದಲ್ಲಿ ಮನ್ನೆಚ್ಚರಿಕೆ ಕ್ರಮವಾಗಿ ಬಸವೇಶ್ವರ ಸಮುದಾಯ ಭವನವನ್ನು ಕೋವಿಡ್ ಆಸ್ಪತ್ರೆಯಾಗಿ ಮಾಡುವ ಸಲುವಾಗಿ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
Read These Next
ಧಾರವಾಡ ಜಿಲ್ಲಾ ಕ್ರೀಡಾಂಗಣ: ವ್ಯಾಯಾಮ ಮೈದಾನ ಉದ್ಘಾಟನೆ
ಧಾರವಾಡ : ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ ಅವರು ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ...
ಜಿಲ್ಲಾ ಉಸ್ತುವಾರಿ ಸಚಿವರಿಂದ ಗಣರಾಜ್ಯೋತ್ಸವದ ಸಾಧನೆಯ ಸಂದೇಶ
ಧಾರವಾಡ : ಸಾವಿರಾರು ಸಂಸ್ಕøತಿ, ಹಲವಾರು ಸಂಪ್ರದಾಯ, ನೂರಾರು ಭಾಷೆಗಳಿಂದ ಕೂಡಿದ ನಮ್ಮ ಭಾರತ ಉಪ ಖಂಡವು, ಅನೇಕತೆಯಲ್ಲಿ ಏಕತೆಯನ್ನು ...
ಹುಣುಸೋಡಿಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಭೇಟಿ- ಪರಿಶೀಲನೆ
ಶಿವಮೊಗ್ಗ : ಶಿವಮೊಗ್ಗ ತಾಲೂಕಿನ ಕಲ್ಲಗಂಗೂರು ಗ್ರಾಮದ ವ್ಯಾಪ್ತಿಯಲ್ಲಿ ಜರುಗಿದ ಸ್ಪೋಟದ ಸ್ಥಳಕ್ಕೆ ಸರ್ಕಾರದ ವಾಣಿಜ್ಯ ಮತ್ತು ...
ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಕೋಲಾರದಲ್ಲಿ ರೈತರ ಹೋರಾಟದ ಮಾರ್ದನಿ
ಜನ ಸಾಮಾನ್ಯರಿಗೆ ಹೊರೆಯಾಗುತ್ತಿರುವ ತೈಲ ಬೆಲೆಗಳ ಏರಿಕೆಗೆ ಕಡಿವಾಣ ಹಾಕಿ ಕೃಷಿ ಕಾಯ್ದೆಗಳ ಬಗ್ಗೆ ಚರ್ಚೆ ಮಾಡಲು ವಿಶೇಷ ಅಧಿವೇಶನ ...
14 ಎಕರೆಯಲ್ಲಿ ಐಟಿ ಪಾರ್ಕ್ ಸ್ಥಾಪನೆ : 200 ಕೋಟಿ ವಿನಿಯೋಗ
ಹಾಸನ : ನಗರದ ಡೈರಿ ಸಮೀಪದ ಕೈಗಾರಿಕಾ ಪ್ರದೇಶದಲ್ಲಿನ ಮೈಸೂರು ಮಿನರಲ್ಸ್ಗೆ ಸೇರಿದ 14 ಎಕರೆ ಜಾಗವಿದ್ದು ಇಲ್ಲಿ ಐಟಿ ಪಾರ್ಕ್ ಹಾಗೂ ...
ಮತದಾನ ಒಂದು ಅಸ್ತ್ರ : ಜಿಲ್ಲಾಧಿಕಾರಿ ಆರ್.ಗಿರೀಶ್
ಹಾಸನ : ಮತದಾನ ಒಂದು ಅಸ್ತ್ರವಿದ್ದಂತೆ ಸರ್ಕಾರವನ್ನೇ ಬದಲಾಯಿಸುವ ಶಕ್ತಿ ಚುನಾವಣೆಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ...
ಧಾರವಾಡ ಜಿಲ್ಲಾ ಕ್ರೀಡಾಂಗಣ: ವ್ಯಾಯಾಮ ಮೈದಾನ ಉದ್ಘಾಟನೆ
ಧಾರವಾಡ : ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ ಅವರು ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ...
ಸಾರ್ವಜನಿಕರ ಮಾಹಿತಿ ಹಾಗೂ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯ ಅಧಿಕೃತ್ ವೆಬ್ಸೈಟ್ ಆರಂಭ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ
ಧಾರವಾಡ : ಜಿಲ್ಲೆಯಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಜಾರಿಗೊಳಿಸಿ, ಸಾರ್ವಜನಿಕರಿಗೆ ಸುರಕ್ಷತೆ, ಅಪರಾಧಗಳ ಕುರಿತು ಮಾಹಿತಿ, ...
ಜಿಲ್ಲಾ ಉಸ್ತುವಾರಿ ಸಚಿವರಿಂದ ಗಣರಾಜ್ಯೋತ್ಸವದ ಸಾಧನೆಯ ಸಂದೇಶ
ಧಾರವಾಡ : ಸಾವಿರಾರು ಸಂಸ್ಕøತಿ, ಹಲವಾರು ಸಂಪ್ರದಾಯ, ನೂರಾರು ಭಾಷೆಗಳಿಂದ ಕೂಡಿದ ನಮ್ಮ ಭಾರತ ಉಪ ಖಂಡವು, ಅನೇಕತೆಯಲ್ಲಿ ಏಕತೆಯನ್ನು ...
ಮಂಗಳೂರಿನ ರಾಕೇಶ ಕೃಷ್ಣಗೆ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ
ಮಂಗಳೂರು : ಪ್ರತೀ ವರ್ಷ ಗಣರಾಜ್ಯೋತ್ಸವದ ಸಂದರ್ಭ ಕೇಂದ್ರ ಸರಕಾರ ನೀಡುವ ‘ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ’ ಪ್ರಶಸ್ತಿಗೆ ...
ವೆನ್ಲಾಕ್ ಆಸ್ಪತ್ರೆಗೆ ಸಚಿವ, ಶಾಸಕದ್ವಯರ ದಿಢೀರ್ ಭೇಟಿ
ಮಂಗಳೂರು : ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ...
ರೈತ ವಿರೋಧಿ ಕಾನೂನು ಹಿಂಪಡೆಯಲು ಎಸ್ಡಿಪಿಐ ನಿಂದ ರೈತ ಐಕ್ಯತಾ ಸಂಗಮ.
ಮಂಗಳೂರು : ಕೃಷಿ ವಿರೋಧಿ ಕಾನೂನನ್ನು ಹಿಂಪಡೆಯಲು ಎಸ್.ಡಿ.ಪಿ.ಐ ಯಿಂದ ಮಂಗಳೂರಿನ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಯಿತು.