ಕಾರವಾರ: ಜಿಲ್ಲಾಧಿಕಾರಿ ಡಾ. ಹರೀಶ್ಕುಮಾರ್ ಕೆ. ಹಾಗೂ ಕಾರವಾರ ಉಪವಿಭಾಗಾಧಿಕಾರಿ ಪ್ರಿಯಾಂಗಾ ಎಂ ಹಾಗೂ ಕುಮಟಾ ಉಪವಿಭಾಗಾಧಿಕಾರಿ ಅಜೀತ ಅವರು ಇಂದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಲ್ಲಿ ಸಮಸ್ಯೆಯಾದಂತಹ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಪರಿಶೀಲನೆ ನಡೆಸಿದರು.
ಕಾರವಾರದ ಲಂಡನ್ ಬ್ರಿಡ್ಜ್, ಬಿಣಗಾ, ಅರಗಾ, ಚೇಂಡಿಯಾ, ತೊಡೂರು, ಅಮದಳ್ಳಿ, ಅಂಕೋಲಾದ ಹರವಾಡ್, ಆವರ್ಸಾ, ಕೆಳಗಿನಬೆಣ, ಹತ್ತಿಕೇರಿ, ಅಲಗೇರಿ, ಶಿರ್ಕುಳಿ, ಶೆಡಗೇರಿ, ಶಿರೂರ, ಬಾಳಾಲೆ, ಹಾಗೂ ಕುಮಟಾದ ಹೀರೆಗುತ್ತಿ, ಬರ್ಗಿ, ದಿವಗಿ ಸ್ಥಳಗಳಿಗೆ ಭೇಟಿ ನೀಡಿ ಕುಲಕುಂಶವಾಗಿ ವಿಚಾರಿಸಿ, ಭೂ ಸ್ವಾಧಿನಕ್ಕೆ ಒಳಪಟ್ಟ ಭೂ ಮಾಲಿಕರೊಂದಿಗೆ ಸಮಾಲೋಚಿಸಿ ಅತ್ಯಂತ ಶೀಘ್ರವಾಗಿ ಸಮಸ್ಯೆಗಳನನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಅವರು ಕುಮಟಾ ಹಾಗೂ ಕಾರವಾರ ಎಸಿಗಳಿಗೆ ಈ ಸಂದರ್ಭದಲ್ಲಿ ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜನೀಯರ ನವೀನ ಹಾಗೂ ಐ ಆರ್.ಬಿ. ಸಿಬ್ಬಂದಿ ಕುಲಕರ್ಣಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.