ಭಾರತೀಯ ನೌಕಾಪಡೆ ವತಿಯಿಂದ ಮೀನುಗಾರರಿಗೆ ಮಾಹಿತಿ ಕಾರ್ಯಾಗಾರ

Source: sonews | By MV Bhatkal | Published on 24th October 2021, 12:19 PM | Coastal News | Don't Miss |


ಭಟ್ಕಳ:ನೇವಿ ಹಾಗೂ ಕೋಸ್ಟ್ಲ್ ಸೆಕ್ಯುರಿಟಿ ಪೊಲೀಸ್ ಅವರು ಜಂಟಿಯಾಗಿ ಇಲ್ಲಿನ ಬಂದರದಲ್ಲಿ ಮೀನುಗಾರರ ಸಭೆಯನ್ನು ನಡೆಸಿ ಮೀನುಗಾರರು ಕೈಗೊಳ್ಳಬೇಕಾದ ಅನೇಕ ಮುಂಜಾಗೃತಾ ಕ್ರಮಗಳ ಕುರಿತು ತಿಳಿಸಿ ಹೇಳಿದರು. 
ನೇವಿಯ ಹಡಗು ಐ.ಎನ್.ಎಸ್. ಕೋಸ್ವಾರಿ ಮೂಲಕ ಬಂದಿದ್ದ ನೇವಿ ಅಧಿಕಾರಿಗಳಾದ ಲೆಫ್ಟಿನೆಂಟ್ ವಿಜಯ ಕುಮಾರ್ ಹಾಗೂ ವಿಜಯಕುಮಾರ್ ಪಿ.ಒ.ಹಾಗೂ ಕೋಸ್ಟಲ್ ಸೆಕ್ಯುರಿಟಿ ಪೊಲೀಸ್‌ನ ಪಿ.ಎಸ್.ಐ. ಅಣ್ಣಪ್ಪ ಮೊಗೇರ ಹಾಗೂ ಕೀರ್ತಿಕುಮಾರ್, ಮತ್ತು ರಮೇಶ್ ಖಾರ್ವಿ ಮುಂತಾದವರು ಸಭೆಯಲ್ಲಿದ್ದರು. 

 


ಸಭೆಯಲ್ಲಿ ಮೀನುಗಾರರಿಗೆ ಮೀನುಗಾರಿಕೆ ಸಂದರ್ಭದಲ್ಲಿ ಯಾವುದೇ ರೀತಿಯ ಸಂಶಯಾತ್ಮಕ ಬೋಟುಗಳನ್ನು ಕಂಡರೆ, ಸಮುದ್ರದಲ್ಲಿ ಯಾವುದೇ ಸಂಶಯಾಸ್ಪದ ವಸ್ತುಗಳನ್ನು ಕಂಡರೆ, ತಕ್ಷಣ ತಿಳಿಸುವಂತೆಯೂ ಹಾಗೂ ಸಮುದ್ರದ ಮೂಲಕ ಭಯೋತ್ಪಾದಕರು ಭಾರತಕ್ಕೆ ನುಸುಳುವ ಸಾಧ್ಯತೆ ಇದ್ದು ಅಂತಹ ಯಾವುದೇ ಚಟುವಟಿಕೆಗಳನ್ನು ಕಂಡರೆ ತಿಳಿಸುವಂತೆಯೂ ತಿಳಿಸಲಾಯಿತು. ಸಭೆಯಲ್ಲಿ ಸುಮಾರು ೫೦ಕ್ಕೂ ಹೆಚ್ಚು ಮೀನುಗಾರರು ಭಾಗವಹಿಸಿದ್ದರು.ಯ ನೌಕಾಪಡೆ ವತಿಯಿಂದ ಮೀನುಗಾರರಿಗೆ ಮಾಹಿತಿ ಕಾರ್ಯಾಗಾರ

Read These Next

ಕಾರವಾರ: ಕುಡಿಯುವ ನೀರು ಸಮಸ್ಯೆ : ಟ್ಯಾಂಕರ್ ಮೂಲಕ ತಕ್ಷಣ ನೀರು ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬರುತ್ತಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ತಕ್ಷಣವೇ ಸಾರ್ವಜನಿಕರಿಗೆ ಕುಡಿಯುವ ನೀರು ...

ಕಾರವಾರ: ಮತದಾನ ಜಾಗೃತಿಯ ಬೆಳಕು ಎಲ್ಲೆಡೆ ಪ್ರಕಾಶಿಸಲಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಬೆಳಕು ಕತ್ತಲನ್ನು ದೂರ ಮಾಡಿ, ಎಲ್ಲೆಡೆ ಬೆಳಕು ಮೂಡಿಸುತ್ತದೆ. ಅದೇ ರೀತಿ ಮತದಾನದ ಕುರಿತ ಜಾಗೃತಿಯ ಬೆಳಕನ್ನು ಎಲ್ಲಾ ಮತದಾರರ ...

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಓರ್ವ ಮಹಿಳೆ ಮೃತ್ಯು, ಇಬ್ಬರ ಸ್ಥಿತಿ ಗಂಭೀರ!

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರ ...