ಆಹಾರ, ನೀರಿನ ಕೊರತೆಯಿಂದ ಕಂಗೆಟ್ಟಿರುವ ಭಾರತೀಯ ವಿದ್ಯಾರ್ಥಿಗಳಿಂದ ಕೇಂದ್ರದ ನೆರವಿಗಾಗಿ ಕೂಗು

Source: Vb | By I.G. Bhatkali | Published on 28th February 2022, 9:28 AM | National News | Global News |
ಹೊಸದಿಲ್ಲಿ: ರಷ್ಯದ ಆಕ್ರಮಣದ ಬಳಿಕ ಉಕ್ರೇನ್‌ನಲ್ಲಿಯ ಲಕ್ಷಾಂತರ ಜನರ ಅಸಹಾಯಕ ಸ್ಥಿತಿಯನ್ನು ಬಣ್ಣಿಸಲು ಅನಿಶ್ಚಿತತೆ, ಭಯ, ಆತಂಕ ಮತ್ತು ಭಯಾನಕತೆ ಇವಿಷ್ಟೇ ಶಬ್ದಗಳು ಸಾಲುವುದಿಲ್ಲ. ರತ್ನದ ಪಡೆಗಳ ಹೆಜ್ಜೆಗಳ ಶಬ್ದ ಹತ್ತಿರವಾಗುತ್ತಿದ್ದಂತೆ ನೆರವಿಗಾಗಿ ಅವರ ಕೂಗು ತಾರಕಕ್ಕೇರುತ್ತಿದೆ.
 
ಬಲಿಷ್ಠ ರಷ್ಯದ ವಿರುದ್ಧ ತೀವ್ರ ಪ್ರತಿರೋಧ ಆ ತ ವನ್ನೊಡ್ಡುತ್ತಿರುವ ಉಕ್ರೇನ್‌ನಲ್ಲಿ ಹಾಕಿಕೊಂಡವರಲ್ಲಿ ಸಾವಿರಾರು ಭಾರತೀಯ ವಿದ್ಯಾರ್ಥಿಗಳಿದ್ದು, ಆಹಾರ ಮತ್ತು ನೀರನ್ನು ಸೀಮಿತ ಪ್ರಮಾಣದಲ್ಲಿ ಹೊಂದಿರುವ ಅವರು ದೇಶದಿಂದ ಹೊರಹೋಗಲು ಸುರಕ್ಷಿತ ಮಾರ್ಗವೊಂದನ್ನು ಕಂಡುಕೊಳ್ಳುವ ಆಸೆಯಲ್ಲಿದ್ದಾರೆ.
 
ತಾನು ತನ್ನ ಸ್ನೇಹಿತರೊಂದಿಗೆ ಅಪಾರ್ಟ್‌ಮೆಂಟ್‌ವೊಂದರಲ್ಲಿ ಆಶ್ರಯ ಪಡೆದಿದ್ದೇನೆ. ಶುಕ್ರವಾರ ಸಂಜೆ ರದ ಪಡೆಗಳು ಪ್ರದೇಶವನ್ನು ಪ್ರವೇಶಿಸಿದ ಬಳಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದೆ ಎಂದು ಉಕ್ರೇನ್‌ನ ಮಿಕೊ ಲೇವ ನಗರದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿ ತಬಿಷ್ ಅಲಿ ಸಿದ್ದೀಕಿ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
 
ನೀರು ಮತ್ತು ಅಗತ್ಯ ಆಹಾರದೊಂದಿಗೆ ಅಪಾರ್ಟ್‌ಮೆಂಟ್‌ನ ತಳಅಂತಸ್ತಿನಲ್ಲಿ ನಿದ್ರೆಯಿಲ್ಲದ ರಾತ್ರಿಯನ್ನು ಕಳೆದಿದ್ದೇವೆ. ವಾಯುದಾಳಿಗಳು,ಗುಂಡಿನ ಮೊರೆತ, ಯುದ್ಧವಿಮಾನಗಳ ಶಬ್ದ ಮತ್ತು ಸಮೀಪದಲ್ಲಿ ಠಳಾಯಿಸುತ್ತಿರುವ ಟ್ಯಾಂಕ್‌ಗಳು ಭಯಾನಕ ಸ್ಥಿತಿಯನ್ನುಂಟು ಮಾಡಿವೆ ಎಂದ ಅವರು, ನಾವು ಭಯಭೀತರಾಗಿ ದ್ದೇವೆ. ಆಹಾರ ಮತ್ತು ನೀರಿನ ಕೊರತೆಯನ್ನು ಎದುರಿಸುತ್ತಿದ್ದೇವೆ. ತುಂಬ ದಿನ ನಾವು ಹೀಗಿರಲು ಸಾಧ್ಯವಿಲ್ಲ' ಎಂದರು. ಸಾಧ್ಯವಿದ್ದಷ್ಟು ಶೀಘ್ರ ತಮ್ಮ ನೆರವಿಗೆ ಬರುವಂತೆ ಭಾರತ ಸರಕಾರವನ್ನು ಅವರು ಕೋರಿಕೊಂಡರು. 'ನಮಗೆ ನೆರವಾಗುವಂತೆ, ನಮ್ಮನ್ನು ತಾಯಾಡಿಗೆ ಮರಳಿ ಕರೆದೊಯ್ಯುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ' ಎಂದು ಉ.ಪ್ರದೇಶದ ಘಾಝಿಯಾಬಾದ್ ನಿವಾಸಿಯಾಗಿರುವ ಸಿದ್ದಿಕಿ ಹೇಳಿದರು.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...