ಹೊಸದಿಲ್ಲಿ: ಭಾರತವು ಜಿ7 ರಾಷ್ಟ್ರಗಳ ಸಹಜ ಮಿತ್ರ : ಮೋದಿ

Source: VB | By S O News | Published on 14th June 2021, 7:13 PM | National News |

ಹೊಸದಿಲ್ಲಿ: ಪರಸ್ಪರ ಹಂಚಿಕೊಂಡಿರುವ ಮೌಲ್ಯಗಳನ್ನು ಸರ್ವಾಧಿಕಾರ, ಭಯೋತ್ಪಾದನೆ,ಹಿಂಸಾತ್ಮಕ ಉಗ್ರವಾದ, ಸುಳ್ಳು ಮಾಹಿತಿ ಮತ್ತು ಆರ್ಥಿಕ ದಬ್ಬಾಳಿಕೆಗಳು ಹುಟ್ಟುಹಾಕಿರುವ ಹಲವಾರು ಬೆದರಿಕೆಗಳಿಂದ ರಕ್ಷಿಸುವಲ್ಲಿ ಭಾರತವು ಜಿ7 ರಾಷ್ಟ್ರಗಳ ಸಹಜ ಮಿತ್ರನಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ರವಿವಾರ ಇಲ್ಲಿ ಹೇಳಿದರು.

ಜಿ7 ಶೃಂಗಸಭೆಯಲ್ಲಿ 'ಮುಕ್ತ ಸಮಾಜಗಳು ಮತ್ತು ಮುಕ್ತ ಆರ್ಥಿಕತೆಗಳು ಕುರಿತ ಅಧಿವೇಶನದಲ್ಲಿ ವರ್ಚುವಲ್ ಭಾಷಣವನ್ನು ಮಾಡಿದ ಮೋದಿ, ಪ್ರಜಾಪ್ರಭುತ್ವ,ಚಿಂತನೆಯ ಹಕ್ಕು ಮತ್ತು ಸ್ವಾತಂತ್ರ್ಯಕ್ಕೆ ಭಾರತದ ನಾಗರಿಕ ಪ್ರತಿಬದ್ಧತೆಯ ಮೇಲೆ ಹೆಚ್ಚಿನ ಬೆಳಕು ಚೆಲ್ಲಿದರು.

ಆಧಾರ್‌, ನೇರ ನಗದು ವರ್ಗಾವಣೆ ಮತ್ತು ಜೆಎಎಂ(ಜನಧನ-ಆಧಾರ-ಮೊಬೈಲ್)ನಂತಹ ಅನ್ವಯಗಳ ಮೂಲಕ ಭಾರತದಲ್ಲಿ ಸಾಮಾಜಿಕ ಸೇರ್ಪಡೆ ಮತ್ತು ಸಬಲೀಕರಣದ ಮೇಲೆ ಡಿಜಿಟಲ್ ತಂತ್ರಜ್ಞಾನದ ಕ್ರಾಂತಿಕಾರಿ ಪರಿಣಾಮಗಳನ್ನೂ ಅವರು ಪ್ರಮುಖವಾಗಿ ಬಿಂಬಿಸಿದರು.

ಮುಕ್ತ ಸಮಾಜಗಳಲ್ಲಿ ಅಂತರ್ನಿಹಿತವಾಗಿರುವ ದೌರ್ಬಲ್ಯಗಳನ್ನು ತನ್ನ ಭಾಷಣದಲ್ಲಿ ಬೆಟ್ಟುಮಾಡಿದ ಪ್ರಧಾನಿ ತಮ್ಮ ಬಳಕೆದಾರರಿಗಾಗಿ ಸುರಕ್ಷಿತ ಸೈಬರ್‌ ವಾತಾವರಣವನ್ನು ಖಚಿತಪಡಿಸುವಂತೆ ತಂತ್ರಜ್ಞಾನ ಕಂಪನಿಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಕರೆ ನೀಡಿದರು.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...