ನೂರು ಕೋಟಿ ಲಸಿಕೆ ಗುರಿ ಸಾಧಿಸಿದ ಭಾರತ. ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ : ವೆಂಕಟೇಶ ನಾಯಕ.

Source: SO News | By Laxmi Tanaya | Published on 22nd October 2021, 10:10 PM | Coastal News |

ಕಾರವಾರ : ಈ ಮೊದಲು ವ್ಯಾಕ್ಸಿನಗಳು ಬೇರೆಬೇರೆ  ದೇಶಗಳಲ್ಲಿ ಕಂಡು ಹಿಡಿದು ನಮ್ಮ ದೇಶಕ್ಕೆ ಬರುತಿತ್ತು. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೋನಾ ವ್ಯಾಕ್ಸಿನನ್ನ ನಮ್ಮ ದೇಶದಲ್ಲಿ  ಕಂಡು ಹಿಡಿದಿರುವುದು ವಿಶೇಷ. ದೇಶದ ನೂರುಕೋಟಿ ಜನರಿಗೆ ಲಸಿಕೆ ನೀಡುವ ಗುರಿ ತಲುಪಿರುವುದು ಹೆಮ್ಮೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಹೇಳಿದ್ದಾರೆ.

ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನಮ್ಮ ಭಾರತದಲ್ಲಿ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಕಂಡು ಹಿಡಿಯಲಾಗಿದೆ. ಮೊದಲು ಆರೋಗ್ಯ ಕಾರ್ಯಕರ್ತರಿಗೆ ನೀಡಿದಾಗ ಕಾಂಗ್ರೆಸ್ ಪಕ್ಷದವರು ಟೀಕಿಸಿದ್ದರು. ಜನರಲ್ಲಿ ಸಂಶಯ ತರಿಸುವಂತ ಕೆಲಸ ಮಾಡುತ್ತಿದ್ದರು. ಆದರೀಗ ದೇಶದ ಜನರು ಕೋವಿಡ್ ಮುಕ್ತರಾಗಲು ಲಸಿಕೆ ಪಡೆದಿದ್ದಾರೆಂದು ಅವರು ಹೇಳಿದರು.

ನೂರು ಕೋಟಿ ಡೋಸ್ ಲಸಿಕೆ ನೀಡಿ ಗುರಿ ಸಾಧಿಸಿದ್ದಕ್ಕೆ  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಜಿಲ್ಲೆಯ ಜನರ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...