ಭಟ್ಕಳ: ರಾಜ್ಯದ ಪ್ರತಿಷ್ಟಿತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕುಗಳಲ್ಲಿ ಒಂದಾದ ದಿ ಭಟಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಪದಾಧಿಕಾರಿಗಳ ಚುನಾವಣೆ ಶನಿವಾರ ನಡೆಯಿತು. ಅಧ್ಯಕ್ಷರಾಗಿ ಇಮ್ತಿಯಾಜ್ ಅಹ್ಮದ್ ಜುಬಾಪು ಹಾಗೂ ಉಪಾಧ್ಯಕ್ಷರಾಗಿ ಮಧುಕೇಶ್ವರ ರಾಮಕೃಷ್ಣ ನಾಯ್ಕ ಆಯ್ಕೆಯಾದರು.
ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿಯ ಮಾರಾಟಾಧಿಕಾರಿ ವಿ.ಹೆಚ್.ಗೌಡರವರು ಚುನಾವಣಾಧಿಕಾರಿಯಾಗಿ ಚುನಾವಣಾ ಕಾರ್ಯಕಲಾಪವನ್ನು ನಿರ್ವಹಿಸಿದರು.