ಭಟ್ಕಳ: ಅಕ್ರಮವಾಗಿ ಸಾಗುವಾನಿ ತುಂಡುಗಳನ್ನು ಸಾಗಿಸುತ್ತಿದ್ದಾಗ ಭಟ್ಕಳ ವಲಯದ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದ ಘಟನೆ ಉತ್ತರಕೊಪ್ಪ ರಸ್ತೆ ಹತ್ತಿರ ಕಮಟೆಕೇರಿ, ಕಾಯ್ಕಿಣಿಯಲ್ಲಿ ಗುರುವಾರ ನಡೆದಿದೆ.
ಅರಣ್ಯ ಇಲಾಖೆಯ ಹೊನ್ನಾವರದ ವಿಭಾಗದ ಭಟ್ಕಳ ವಲಯದ ಸಿಬ್ಬಂದಿಗಳು ರಾತ್ರಿ ಗಸ್ತು ತಿರುಗುತ್ತಿರುವಾಗ ಉತ್ತರಕೊಪ್ಪ ರಸ್ತೆ ಹತ್ತಿರ ಕಮಟೆಕೇರಿ, ಕಾಯ್ಕಿಣಿಯಲ್ಲಿ ಅಕ್ರಮವಾಗಿ ಸಾಗವಾನಿ ಮರದಿಂದ ತಯಾರಿಸಿದ 60.000 ರೂ. ಬೆಲೆಬಾಳುವ ಚೌಕಟ್ಟುಗಳನ್ನು ಸಾಗಿಸುತ್ತಿದ್ದರು.
ಈ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿಗಳು ತಡೆಯಲು ಪ್ರಯತ್ನಿಸಿದಾಗ ಆರೋಪಿಗಳು ಪರಾರಿಯಾಗಿದ್ದಾರೆ. ವಾಹನ ಮತ್ತು ಅಕ್ರಮವಾಗಿ ವಾಹನದಲ್ಲಿ ಸಾಗಿಸುತ್ತಿದ್ದ ಸಾಗುವಾನಿ ಚೌಕಟ್ಟುಗಳನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಹಿರಿಯ ಅಧಿಕಾರಿಗಳಾದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ನಾಯ್ಕ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಸುದರ್ಶನ್ ಆರ್. ಕೆ. ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಸವಿತಾ ಆರ್, ದೇವಾಡಿಗ, ಉಪ ವಲಯ ಅರಣ್ಯಾಧಿಕಾರಿು ಜಗದೀಶ್ ನಾಯ್ಕ ಹಾಗೂ ಶ್ರೀಕಾಂತ್ ಎಸ್, ಪವಾರ್ ಹಾಗೂ ಶಿರಾಲಿ ಶಾಖಾ ಸಿಬ್ಬಂದಿಗಳು ಮತ್ತು ವಾಹನ ಚಾಲಕರು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.