ಯಲ್ಲಾಪುರ : ಖಾಸಗಿ ಬಸ್ ನಲ್ಲಿ ಸಾಗಿಸುತ್ತಿದ್ದ ಲಕ್ಷಾಂತರ ರೂಪಾಯಿ ಹವಾಲಾ ಹಣವನ್ನ ವಶಕ್ಕೆ ಪಡೆದ ಘಟನೆ
ಯಲ್ಲಾಪುರದಲ್ಲಿ ನಡೆದಿದೆ.
ಯಲ್ಲಾಪುರದ ಜೋಡುಕೆರೆ ಬಳಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಕೆಎ 51 ಎಎಫ್ 9490 ನಂಬರ್ ಖಾಸಗಿ ಬಸ್ ಗಣೇಶ ಟ್ರಾವೆಲ್ಸ್ ನಲ್ಲಿ ಸಾಗಿಸುತ್ತಿದ್ದ 58 ಲಕ್ಷ ರೂ ಹಣ ಸಾಗಿಸಲಾಗುತಿತ್ತು.
ಖಚಿತ ಮಾಹಿತಿ ಪಡೆದ ಯಲ್ಲಾಪುರ ಪೊಲೀಸರು ದಾಳಿ ನಡೆಸಿದ್ದರು.ಈ ವೇಳೆ ಗುಜರಾತ್ ಮೂಲದ ಐವರನ್ನ ಬಂಧಿಸಲಾಗಿದೆ. ದಿನೇಶ ಠಾಕೂರ (34), ಪಂಕಜಕುಮಾರ ಪಟೇಲ್ (40), ಗೋವಿಂದ ಪಟೇಲ್ (50), ಮುಖೇಶ ಪಟೇಲ್ (55), ಉಪೇಂದ್ರ ಪಟೇಲ್ (47) ಬಂಧಿತರಾಗಿದ್ದಾರೆ.
ಬೆಳಗಾವಿಯಿಂದ ಮಂಗಳೂರು ಕಡೆ ಹಣವನ್ನ ಸಾಗಿಸಲಾಗುತಿತ್ತು ಎನ್ನಲಾಗಿದೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.