ಕಾರವಾರ : ಅಗತ್ಯಕ್ಕಿಂತ ಹೆಚ್ಚಿನ ಮದ್ಯ ದಾಸ್ತಾನು ಮಾಡಿದ್ದ ಹಳಿಯಾಳ ತಾಲೂಕು ಮುರ್ಖವಾಡ ಗ್ರಾಮದ ಮುಗದಕೊಪ್ಪ ರಸ್ತೆಯಲ್ಲಿರುವ ರೇಣುಕಾ ವೈನ್ಸ್ ಚುನಾವಣೆ ಮುಗಿಯುವವರೆಗೆ ಅಮಾನತ್ತಿಟ್ಟು ಜಿಲ್ಲಾಧಿಕಾರಿ ಡಾ.ಹರೀಶ್ಕುಮಾರ್ ಕೆ. ಆದೇಶಿಸಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಯಲ್ಲಾಪುರ ಅಬಕಾರಿ ಉಪನಿರೀಕ್ಷಕರು ಪರಿಶೀಲನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ರೇಣುಕಾ ವೈನ್ಸ್ ಸಿಎಲ್2 ನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಮದ್ಯ ದಾಸ್ತಾನು ಮಾಡಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಹಾಗೂ ಚುನಾವಣೆ ಸಂದರ್ಭದಲ್ಲಿ ಸನ್ನದು ಷರತ್ತು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಕಾಯ್ದಿರಿಸಿ ಮೇ.24ರಂದು ಚುನಾವಣೆ ಮುಗಿಯುವವರೆಗೆ ಅಮಾನತ್ತಿನಲ್ಲಿಟ್ಟಿರುವುದಾಗಿ ಆದೇಶದಲ್ಲಿ ಅವರು ತಿಳಿಸಿದ್ದಾರೆ.
ರೇಣುಕಾ ವೈನ್ಸ್ ಬೆಳಗಾವಿ ಜಿಲ್ಲೆ ಮಹಂತೇಶನಗರದ ಶ್ರೀಕಾಂತ್ ಕಲಾಲ ಅವರಿಗೆ ಸೇರಿದ್ದು ಈ ಹಿಂದೆ ಮೂರು ಪ್ರಕರಣಗಳಲ್ಲಿ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಎರಡು ಪ್ರಕರಣಗಳಲ್ಲಿ ಇತ್ಯರ್ಥಪಡಿಸಲು ವಿಧಿಸಲಾಗಿದ್ದ ದಂಡದ ಮೊತ್ತವನ್ನು ಪಾವತಿಸುವಲ್ಲಿ ವಿಫಲರಾಗಿರುತ್ತಾರೆ ಹಾಗೂ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕೂಡಾ ಮಾದರಿ ನೀತಿ ಸಂಹಿತೆ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕೇಂದ್ರ ಅಬಕಾರಿ ಆಯುಕ್ತರು ಸೂಕ್ತ ಕ್ರಮ ವಹಿಸಲು ನಿರ್ದೇಶಕ ನೀಡಿದ ಹಾಗೂ ಯಲ್ಲಾಪುರ ಅಬಕಾರಿ ಉಪ ನಿರೀಕ್ಷಕರ ಶಿಫಾರಸಿನಂತೆ ರೇಣುಕಾ ವೈನ್ಸ್ ಲೋಕಸಭೆ ಚುನಾವಣೆ ಮುಗಿಯುವವರೆಗೆ ರೇಣುಕಾ ವೈನ್ಸ್ ಸಿಎಲ್2 ಸನ್ನದು ಅಮಾನತ್ತಿನಟ್ಟಿರುವುದಾಗಿ ಆದೇಶದಲ್ಲಿ ಜಿಲ್ಲಾದಿಕಾರಿüಯವರು ತಿಳಿಸಿದ್ದಾರೆ.