ಭಟ್ಕಳ: ಕಾರ್ಡ್ ಸ್ಕಿಮ್ಮಿಂಗ್ನಲ್ಲಿ ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ಖನ್ನಾ ಹಾಕಿ ಹಣ ತೆಗೆಯುವ ಕೆಲ ಪ್ರಕರಣಗಳು ಇತ್ತೀಚೆಗೆ ವರದಿಯಾಗುತ್ತಿದ್ದು, ಐಸಿಐಸಿಐ ಬ್ಯಾಂಕ್ ಗ್ರಾಹಕರು ಇಂಥ ಪ್ರಕರಣಗಳಲ್ಲಿ ಹಣ ಕಳೆದುಕೊಂಡರೆ, ಬ್ಯಾಂಕ್ ಗಮನಕ್ಕೆ ತಂದಲ್ಲಿ ತಕ್ಷಣ ಕಳೆದುಕೊಂಡ ಹಣ ಮರುಪಾವತಿಗೆ ಬ್ಯಾಂಕ್ ಕ್ರಮ ಕೈಗೊಳ್ಳಲಿದೆ ಎಂದು ಐ.ಸಿ.ಐ.ಸಿ.ಐ ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ಕೆಲದಿನಗಳಿಂದ ಭಟ್ಕಳ ಸುತ್ತಮುತ್ತ ಕೆಲ ಗ್ರಾಹಕರಿಂದ ಈ ಬಗೆಯ ದೂರುಗಳು ಬಂದಿದ್ದು, ಈ ಘಟನೆಗಳಿಂದ ಹಣ ಕಳೆದುಕೊಂಡ ಗ್ರಾಹಕರಿಗೆ ಐಸಿಐಸಿಐ ಬ್ಯಾಂಕ್ ಈಗಾಗಲೇ ಹಣ ಪಾವತಿಸಿದೆ. ಈ ಘಟನೆಗಳಿಂದಾಗಿ ಗ್ರಾಹಕರಿಗೆ ಯಾವುದೇ ಹಣಕಾಸು ನಷ್ಟ ಉಂಟಾಗಿಲ್ಲ ಎಂದು ದೃಢಪಡಿಸುತ್ತೇವೆ. ಇಂಥ ವಂಚನೆಗೆ ಒಳಗಾದ ಗ್ರಾಹಕರು ಬ್ಯಾಂಕ್ಗೆ ದೂರು ನೀಡಬಹುದು" ಎಂದು ಐಸಿಐಸಿಐ ಬ್ಯಾಂಕ್ ವಕ್ತಾರರು ಪ್ರಕಟಣೆಯಲ್ಲಿ ಹೇಳಿದ್ದಾರೆ.