ಮಂಗಳೂರು : ಲಾಕ್ ಡೌನ್ ಹಿನ್ನೆಲೆ ವಾಹನ ಇಲ್ಲದೆ ನಗರದಲ್ಲಿ ಪರದಾಟ ನಡೆಸ್ತಾ ಇದ್ದ ಹಿರಿಯ ನಾಗರಿಕರ ನೆರವಿಗೆ ಪೊಲೀಸರು ನಿಂತಿದ್ದಾರೆ.
ಕುಲಶೇಖರ ನಿವಾಸಿಗಳು ನಗರದ ಬ್ಯಾಂಕ್ ಹಾಗೂ ಅಗತ್ಯ ಖರೀದಿ ಮಂಗಳೂರಿಗೆ ಬಂದಿದ್ದರು. ಬಸ್ ಸಂಚಾರ ಇಲ್ಲದೆ ಆಟೋ ರಿಕ್ಷಾಕ್ಕಾಗಿ ಮೂರು ಗಂಟೆಗೂ ಅಧಿಕ ಕಾಲ ಕಾದು ಕೂತಿದ್ದರು.
ಆಗ ಪೊಲೀಸ್ ಆಯುಕ್ತರನ್ನು ಕಂಡು ಸ್ಥಳಕ್ಕೆ ಬಂದು ಇವರು ಸಹಾಯ ಕೇಳಿದಾಗ
ಪೊಲೀಸ್ ವಾಹನದಲ್ಲೇ ಅವರ ಮನೆ ತಲುಪಿಸಿ ಆಯುಕ್ತರು ಮಾನವೀಯತೆ ಮೆರೆದಿದ್ದಾರೆ.