ಯಲ್ಲಾಪುರ : ಇಲ್ಲಿನ ಶಿರ್ಲೆ ಜಲಪಾತ ನೋಡಲು ಬಂದು ನಾಪತ್ತೆಯಾಗಿದ್ದ ಆರು ಪ್ರವಾಸಿಗರು ಪತ್ತೆಯಾಗಿದ್ದಾರೆ.
ಗುರುವಾರ ಮಧ್ಯಾಹ್ನ ಪ್ರವಾಸಕ್ಕೆಂದು ಹುಬ್ಬಳ್ಳಿ ಮೂಲದ ಆರು ಜನ ಪ್ರವಾಸಿಗರು ಬೈಕ್ ಮೇಲೆ ಶಿರ್ಲೆ ಜಲಪಾತ ನೋಡಲು ಬಂದಿದ್ದರು. ಬಾರೀ ಮಳೆಗೆ ಕಾಲು ಸಂಕ ಕೊಚ್ಚಿಹೋಗಿದ್ದರಿಂದ ದಾರಿ ಸಿಗದೇ ಪರದಾಡಿದ್ದರು. ಶಿರ್ಲೆ ಗ್ರಾಮದ ಸುಣಜೋಗದ ರಾಘವೇಂದ್ರ ಭಟ್ಟ ಎಂಬುವವರ ತೋಟದಲ್ಲಿ ಆರು ಜನ ಪತ್ತೆಯಾಗಿದ್ದಾರೆ.
ತೋಟದಲ್ಲಿ ಕಂಡ ರಾಘವೇಂದ್ರ ಭಟ್ ಮಾತನಾಡಿಸಿದಾಗ ವಿಷಯ ಹೇಳಿದ್ದಾರೆ.
ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಯವರಿಗೆ ಮಾಹಿತಿ ನೀಡಿದ್ದರಿಂದ ಆರು ಜನರನ್ನ ರಕ್ಷಣೆ ಮಾಡಲಾಗಿದೆ. ಕಳೆದ ವರ್ಷ ಕೂಡ ಶಿರ್ಲೆ ಜಲಪಾತ ನೋಡಲು ಬಂದ ಹಲವರನ್ನ ರಕ್ಷಿಸಲಾಗಿತ್ತು.