ಹುಬ್ಬಳ್ಳಿ: ವಿದ್ಯುತ್ ತಂತಿ ತಗುಲಿ ಸಾವಿಗೀಡಾದ ಲೈನ್ ಮ್ಯಾನ್
ಹುಬ್ಬಳ್ಳಿ:ನಗರದ ಕಾರವಾರ ರಸ್ತೆಯಲ್ಲಿನ ಭಾಷಲ್ ಮಿಶನ್ ಶಾಲೆಯ ಹತ್ತಿರ ಘಟನೆ ನಡೆದಿದೆ.
ಗುತ್ತಿಗೆ ಆಧಾರದ ಮೇಲೆ ಲೈನ್ ಮ್ಯಾನ್ ಕೆಲಸ ಮಾಡುತಿದ್ದ ಎಂದು ತಿಳಿದುಬಂದಿದೆ.
ಕಂಬದಲ್ಲಿಯೇ ಕೆಲಸ ಮಾಡುತಿದ್ದಾಗ ವಿದ್ಯುತ್ ಸರಬರಾಜಾಗಿ ಸಾವು ಸಂಭವಿಸಿದ್ದು ಮೃತದೇಹ ವಿದ್ಯುತ್ ತಂತಿಗೆ ಜೋತು ಬಿದ್ದಿದೆ.
ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಮೂಲದ ಶಂಕರಗೌಡ ಮೃತ ವ್ಯಕ್ತಿ..
ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
ಮರಣೋತ್ತರ ಪರೀಕ್ಷೆಗಾಗಿ ಮೃತದೇಹ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದು ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ.