ತಮ್ಮ ಮನೆಯ ಗಣಪತಿಯನ್ನು ತಾವು ನಿರ್ಮಿಸುವ ಹೋಟೆಲ್ ಉದ್ಯಮಿ  ಕಾಮತ್

Source: sonews | By Staff Correspondent | Published on 23rd August 2018, 10:35 PM | Coastal News | State News | Special Report | Don't Miss |

ಭಟ್ಕಳ: ತನ್ನ ಕೈ ಕೆಳಗೆ ನೂರಾರು ಮಂದಿ ಕೆಲಸಗಾರರಿದ್ದರೂ ಹಿರಿಯರ ಸಂಪ್ರದಾಯವನ್ನು ಪಾಲಿಸಲು ಹಿಂಜರಿಯದ ಹೋಟೆಲ್ ಉದ್ಯಮಿ ಭಟ್ಕಳ ಮೂಲದ ಮುಂಬೈ ನಿವಾಸಿ ವಿಠಲ್ ರಾಮಚಂದ್ರ ಕಾಮತ್, ಪ್ರತಿವರ್ಷ ಗಣೇಶ ಚೌತಿಗೆ ಒಂದು ತಿಂಗಳು ಮುಂಚೆ ಭಟ್ಕಳಕ್ಕೆ ಬಂದು ತನ್ನ ಕೈಯಿಂದ ಗಣೇಶನ ಸುಂದರ ವಿಗ್ರಹವನ್ನು ನಿರ್ಮಿಸಿ ಗಣಪತಿಹಬ್ಬವನ್ನು ಅತ್ಯಂತ ವಿಜೃಂಬಣೆಯಿಂದ ನೆರವೇರಿಸಿಕೊಂಡು ಬರುತ್ತಿದ್ದಾರೆ.  

ಹಿರಿಯರು ಪಾಲಿಸಿ ಬಂದ ಸಂಸ್ಕøತಿ, ಪರಂಪರೆಯನ್ನು ಇಂದಿಗೂ ಮುಂದುವರೆಸಿ, ತಿಂಗಳುಗಟ್ಟಲೆ ಹೋಟೆಲ್ ಉದ್ಯಮ ಬಿಟ್ಟು ತಮ್ಮ ಗಣಪತಿಯನ್ನು ತಾವೆ ನಿರ್ಮಿಸಿ ವಿಜೃಂಬಣೆಯಿಂದ ಗಣಪತಿ ಹಬ್ಬವನ್ನು ಆಚರಿಸಲು ಕಾಮತ ಕುಟುಂಬ ಸಜ್ಜಾಗುತ್ತಿದೆ.
 
ಮೂಲತಃ ಭಟ್ಕಳ ನಿವಾಸಿ, ಮಹಾರಾಷ್ಟ್ರದ ಕಣ್‍ಕೌಲಿಯಲ್ಲಿ ಮಂಜುನಾಥ ಹೋಟೆಲ್ ಉದ್ಯೋಗ ನಡೆಸುತ್ತಿರುವ ವಿಠಲ್ ರಾಮಚಂದ್ರ ಕಾಮತ ಕುಟುಂಬ ತಮ್ಮ ಮನೆಯ ಗಣಪತಿಯನ್ನ ತಾವೆ ನಿರ್ಮಿಸುತ್ತಿದ್ದಾರೆ . ಸುಮಾರು 60ವರ್ಷಗಳ ಹಿಂದೆ ಅವರ ಪೂರ್ವಿಕರು ಊರಿಗೆಲ್ಲಾ ಗಣಪತಿ ಮೂರ್ತಿ ಮಾಡಿಕೋಡುತ್ತಿದ್ದರು. ಮನೆಯ ಸದಸ್ಯರು ಉದ್ಯೋಗ ಆರಿಸಿ ಪರ ಊರಿಗೆ ವಲಸೆ ಹೋದ ಪರಿಣಾಮ ಕ್ರಮೇಣ ಗಣಪತಿ ಮೂರ್ತಿ ಮಾಡುವ ಕಾಯಕ ಅಲ್ಲಿಗೆ ನಿಂತಿತು. ಆದರೆ ಅವರ ಕುಟುಂಬದ ಹಿರಿಯರು ನಮ್ಮ ಮನೆಯ ಗಣಪತಿ ನಾವೆ ತಯಾರಿಸಬೇಕು, ನಾವು ಆರಾಧಿಸುತ್ತಿದ್ದ ವಡೇರ ಮಠಕ್ಕೂ ನಮ್ಮ ವಂಶಸ್ಥರ ಕೈಯಿಂದ ನಿರ್ಮಿಸಿದ ಗಣಪತಿಯನ್ನು ನೀಡಬೇಕು ಎಂದು ಬಯಸಿದ್ದರು. ಅದನ್ನು ಚಾಚು ತಪ್ಪದೆ ಈ ಕುಟುಂಬ ಪಾಲಿಸಿ ಬಂದಿದ್ದು ಗಣಪತಿಯ ಹಬ್ಬಕ್ಕೆ ತಿಂಗಳು  ಇರುವಾಗ ಅವರ ಕುಟುಂಬದ ವಿಠಲ್ ಕಾಮತ ಭಟ್ಕಳಕ್ಕೆ ಬಂದು ವಿಗ್ರಹದ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಇವರು ಒಟ್ಟಾರೆಯಾಗಿ 3 ಗಣಪತಿ ನಿರ್ಮಿಸುತ್ತಾರೆ. ಅದರಲ್ಲೂ ಸಂಪ್ರದಾಯದಂತೆ ಜೇಡಿಮಣ್ಣಿನ ಪರಿಸರ ಸ್ನೇಹಿ ಸುಂದರ ಗಣಪತಿ ವಿಗ್ರಹ ನಿರ್ಮಿಸುತ್ತಾರೆ.
    
ಮಹರಾಷ್ಟ್ರದ ಕಣಕೌಲಿಯಲ್ಲಿ ಹೊಟೇಲ್ ಉದ್ಯೋಗ ನಡೆಸುತ್ತಿರುವ ಇವರ ಕೈಕೆಳಗೆ ನೂರಾರು ಜನ ಕೆಲಸ ಮಾಡುತ್ತಿದ್ದಾರೆ. ಹಣವೊಂದೆ ಮುಖ್ಯವಲ್ಲ, ಹಿರಿಯರ ಸಂಪ್ರದಾಯ, ಆಚರಣೆಯನ್ನು ಪಾಲಿಸಿಕೊಂಡು ಹೋಗಬೇಕು. ಇದರಿಂದ ಮನಸ್ಸಿಗೆ ತೃಪ್ತಿ ದೊರೆಯುವದಲ್ಲದೆ, ಧಾರ್ಮಿಕ ಕಾರ್ಯದಲ್ಲಿ ತೊಡಗೊಕೊಂಡ ಸಂತೋಷವೂ ದೊರಕುತ್ತದೆ ಎನ್ನುತ್ತಾರೆ ವಿಠಲ್ ಕಾಮತ.  ತಿಂಗಳುಗಟ್ಟಲೆ ವ್ಯವಹಾರವನ್ನು ಬದಿಗಿರಿಸಿ ಸ್ವತಃ ಗಣಪತಿ ತಯಾರಿಸುವ ಬದಲು ಮೂರ್ತಿ ತಯಾರಿಸುವವರ ಹತ್ತಿರ ಮಾಡಿಸಬಹುದಿತ್ತು. ಆದರೆ ಹಿರಿಯರ ಸಂಪ್ರದಾಯ, ಬದ್ದತೆ, ಪರಂಪರೆ ನಮ್ಮ ಮುಂದಿನ ಪೀಳಿಗೆಯೂ ಪಾಲಿಸಬೇಕು ಎನ್ನವದು ಅವರ ಬಯಕೆ.

 

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...