ಶಿವಮೊಗ್ಗ : ಇತ್ತೀಚೆಗೆ 2020ನೇ ಸಾಲಿನ ಅಖಿತ ಭಾರತ ಗೃಹರಕ್ಷಕ ದಳ ದಿನಾಚರಣೆ ಅಂಗವಾಗಿ ಶಿವಮೊಗ್ಗ ಡಿ.ಎ.ಅರ್. ಕವಾಯತು ಮೈದಾನದಲ್ಲಿ ರೋಟರಿ ಶಿವಮೊಗ್ಗರವರ ಸಹಯೋಗದೊಂದಿಗೆ ಶಿವಮೊಗ್ಗ ಜಿಲ್ಲೆ 26 ಗೃಹರಕ್ಷಕರು ಮತ್ತು ಗೃಹರಕ್ಷಕಿಯರು ರಕ್ತಧಾನ, ರಕ್ತಗುಂಪು ತಪಾಸಣೆ ಹಾಗೂ 30 ಗೃಹರಕ್ಷಕ ಗೃಹರಕ್ಷಕಿಯರಿಗೆ ಐ ದೃಷ್ಠಿ ಕಣ್ಣಿನ ಆಸ್ಪತ್ರೆ ರವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣೆಯನ್ನು ಮಾಡಲಾಯಿತು.
ಡಿ.ಎ.ಆರ್. ಪೊಲೀಸ್ ಸಭಾ ಭವನದಲ್ಲಿ ಅಖಿಲ ಭಾರತ ಗೃಹರಕ್ಷಕ ದಳ ದಿನಾಚರಣೆಯನ್ನು ಹಮ್ಮಿಕೊಂಡಿದ್ದು. ಈ ಸಭಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪ್ರೋ.ಟಿ.ಎಸ್.ಹೂವಯ್ಯಗೌಡ ಕುಲಸಚಿವರು ರಾಷ್ಟ್ರೀಯ ಶಿಕ್ಷಣ ಸಮಿತಿ (ರಿ)ಮತ್ತು ಸಾವಿತ್ರಿ ಹೆಚ್.ಎಸ್. ಉಪನಿರ್ದೇಶಕರು ಜಿಲ್ಲಾ ಖಜಾನೆ ಶಿವಮೊಗ್ಗ, ಮತ್ತು ಈ ಕಾರ್ಯಕ್ರಮದಲ್ಲಿ ಮತ್ತು ಶ್ರೀ ಉಮೇಶ್ ಈಶ್ವರನಾಯ್ಕ, ಡಿ.ವೈ.ಎಸ್.ಪಿ. ಶಿವಮೊಗ್ಗ ಇವರು ಗೌರವ ಉಪಸ್ಥಿತಿಯಾಗಿ ಭಾಗವಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಶಿವಕುಮಾರ್ ಜಿಲ್ಲಾ ಸಮಾದೇಷ್ಟರು ಶಿವಮೊಗ್ಗ ಜಿಲ್ಲೆ ಇವರು ವಹಿಸಿಕೊಂಡಿದ್ದು. ಮುಖ್ಯ ಅತಿಥಿಗಳು ಮಾತನಾಡಿ, ಗೃಹರಕ್ಷಕರ ಕರ್ತವ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಉತ್ತಮ ಕರ್ತವ್ಯ ನಿರ್ವಹಿಸಿದ ಗೃಹರಕ್ಷಕ ಮತ್ತು ಗೃಹರಕ್ಷಕಿಯರಿಗೆ ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲೆಯ ಎಲ್ಲಾ ಘಟಕಾಧಿಕಾರಿಗಳಿಗೆ ಸನ್ಮಾನಿಸಲಾಯಿತು.
ಜಿಲ್ಲಾ ಸಮಾದೇಷ್ಟರಾದ ಎಸ್.ಶಿವಕುಮಾರ್ ಸ್ವಾಗತಿಸಿದರು. ಸಹಾಯಕ ಭೋಧಕರಾದ ಹೆಚ್.ದಿನೇಶ್ ವಾರ್ಷಿಕವರದಿ ಓದಿದರು. ಶೈಲಜಾ ವ್ಯಕ್ತಿ ಪರಿಚರ ಮಾಡಿದರು,
ಕಾರ್ಯಕ್ರಮದಲ್ಲಿ ಹೆಚ್.ಇ.ಶಿವಾನಂದಪ್ಪ, ಶಿವಮೊಗ್ಗ ಘಟಕಾಧಿಕಾರಿ ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಮಸ್ತ ಗೃಹರಕ್ಷಕ, ಗೃಹರಕ್ಷಕಿಯರು ಘಟಕಾಧಿಕಾರಿಗಳು ಮತ್ತು ಕಛೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.