ಮುಂಡಗೋಡ : ತಾಲೂಕಿನ ಚಿಗಳ್ಳಿ ಜಲಾಶಯ ಒಡೆದು ಅಪಾರಹಾನಿ ಘಟಿಸಿದ ಸ್ಥಳಕ್ಕೆ ಗದಗ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಕೆ.ಪಾಟೀಲ್ ಭೇಟಿನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಜಲಾಶಯದ ಅಕ್ಕಪಕ್ಕದ ಹೊಲಗಳಗಳಿಗೆ ನೀರುನುಗ್ಗಿ ನಷ್ಟಅನುಭವಿಸಿದ ರೈತರು ಜಮೀನುಗಳಲ್ಲಿನ ಬೆಳೆಗಳು ಸಂಪೂರ್ಣ ನಾಶವಾಗಿವೆ ಸಾಲಸೋಲ ಮಾಡಿ ಬೆಳೆ ಬೇಳೆದಂತನಾವು ನಮ್ಮ ಉಪಜೀವನ ಸಾಗೀಸುವುದು ಹೇಗೆ ಅಲ್ಲದೆ ಮಾಡಿದ್ದ ಸಾಲವನ್ನು ತೀರಿಸುವುದಾದರು ಹೇಗೆ ಮುಂದಿನ ಜೀವನ ಹೇಗಪ್ಪ ನಡೆಸುವುದು ತಿಳಿಯದಂತಾಗಿದೆ ಎಂದು ಅಳತ್ತಾ ಶಾಸಕರಲ್ಲಿ ತಮ್ಮ ಕಷ್ಟವನ್ನು ಹೇಳಿಕೊಂಡರು.
ಎಚ್.ಕೆ.ಪಾಟೀಲ ಸಂತ್ರಸ್ಥರನ್ನು ಸಮಾಧಾನಪಡಿಸುತ್ತಾ ಯಾವುತ್ತೂ ಧೈರ್ಯಕಳೆದುಕೊಳ್ಳಬೇಡಿ ಧೈರ್ಯದಿಂದಿರಿ ಬೆಳೆಹಾನಿಯಾದ ಕುರಿತು ಸರ್ಕಾರದ ಗಮನಕ್ಕೆ ತಂದು ಆದಷ್ಟು ಬೇಗನೆ ಪರಿಹಾರಕೊಡಿಸುವ ಕೆಲಸಮಾಡುತ್ತೇವೆ ಎಂದು
ಈ ಸಂದರ್ಭದಲ್ಲಿ ಉ.ಕ.ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ್, ಮಾಜಿ ಸಚಿವ ರುದ್ರಪ್ಪ ಲಮಾಣಿ, ಮಾಜಿ ಸಂಸದ ಆಯ್.ಜಿ.ಸನದಿ, ಮುಂಡಗೋಡ ಕಾಂಗೈ ಧುರಿಣ ಕೃಷ್ಣ ಹಿರಳ್ಳಿ, ತಂಗಚ್ಚನ್ ಸೇರಿದಂತೆ ಮುಂತಾದ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು