ಹೊಸದಿಲ್ಲಿ: ಹಿಜಾಬ್ ಧರಿಸಿ ಉಡುಪಿಯ ಸರಕಾರಿ ಕಾಲೇಜು ಪ್ರವೇಶಿಸಲು 8 ವಿದ್ಯಾರ್ಥಿನಿಯರಿಗೆ ನಿರ್ಬಂಧ ವಿಧಿಸಿರು ವುದಕ್ಕೆ ಸಂಬಂಧಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಎಚ್ಆರ್ಸಿ) ಗುರುವಾರ ಕರ್ನಾಟಕ ಸರಕಾರಕ್ಕೆ ನೋಟಿಸು ಜಾರಿ ಮಾಡಿದೆ.
“ಈ ಪ್ರಕರಣದ ಸತ್ಯಾಂಶಗಳು ಕಳವಳಕಾರಿ ಯಾಗಿದೆ. ದೂರಿನಲ್ಲಿ ಮಾಡಿರುವ ಆರೋಪ ಶಿಕ್ಷಣದ ಹಕ್ಕನ್ನು ಒಳಗೊಂಡಿರುವ ಗಂಭೀರ ಸ್ವರೂಪದ್ದಾಗಿದೆ. ಆದುದರಿಂದ ಈ ಪ್ರಕರಣ ಸಂತ್ರಸ್ತ ವಿದ್ಯಾರ್ಥಿನಿಯರ ಮಾನವ ಹಕ್ಕುಗಳ ಘೋರ ಉಲ್ಲಂಘನೆಯನ್ನು ಒಳಗೊಂಡಿದೆ” ಎಂದು ನೋಟಿಸಿನಲ್ಲಿ ಹೇಳಲಾಗಿದೆ.
ನೋಟಿಸನ್ನು ಉಡುಪಿಯ ಜಿಲ್ಲಾ ಮ್ಯಾಜಿ ಸ್ಟೇಟ್, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಕಳುಹಿಸಲಾಗಿದೆ ಹಾಗೂ ನಾಲ್ಕು ವಾರಗಳ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಹಿಜಾಬ್ ಧರಿಸಿ ತರಗತಿ ಪರ್ವೇಶಿಸಲು ವಿದ್ಯಾರ್ಥಿಗಳಿಗೆ ಉಡುಪಿಯ ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ನಿರ್ಬಂಧ ವಿಧಿಸಿ ಸುಮಾರು ಒಂದು ತಿಂಗಳು ಕಳೆಯಿತು. ತರಗತಿ ಪ್ರವೇಶಿಸಲು ಹಾಗೂ ಪಾಠಗಳನ್ನು ಕೇಳಲು ವಿದ್ಯಾರ್ಥಿನಿಯರು ಈಗಲೂ ಹೋರಾಟ ನಡೆಸುತ್ತಿದ್ದಾರೆ. ಈ ಎಲ್ಲ ವಿದ್ಯಾ ರ್ಥಿನಿಯರು 16ರಿಂದ 19 ವರ್ಷಗಳ ಒಳಗಿ ನವರು, ಡಿಸೆಂಬರ್ 31ರಿಂದ ಗೈರು ಹಾಜರು ದಾಖಲಿಸಲಾಗಿದೆ.
ಈ ಬಗ್ಗೆ ಗುಂಪಿನ ಇಬ್ಬರು ವಿದ್ಯಾರ್ಥಿನಿ ಯರಾದ ಎ.ಎಚ್. ಅಲ್ಫಾಸ್ (18) ಹಾಗೂ ಆಲಿಯಾ ಅಸ್ಸಾದಿ (17) ಈ ನಿರ್ಬಂಧದಿಂದ ತಮ್ಮ ಶಿಕ್ಷಣದಲ್ಲಿ ಯಾವ ರೀತಿಯ ಪರಿಣಾಮ ಉಂಟು ಮಾಡುತ್ತಿದೆ ಎಂಬ ಬಗ್ಗೆ ವಿವರಿಸಿದ್ದಾರೆ. “ನಾವು ಇಸ್ಲಾಂ ಧರ್ಮವನ್ನು ಅನುಸರಿಸುತ್ತಿದ್ದೇವೆ. ಹಿಜಾಬ್ ನಮ್ಮ ನಂಬಿಕೆಯ ಒಂದು ಭಾಗ. ಇದ ರೊಂದಿಗೆ ನಾವು ಭವಿಷ್ಯ ಹಾಗೂ ಉತ್ತಮ ಜೀವನದ ಬಗ್ಗೆ ನಿರೀಕ್ಷೆ ಇರಿಸಿ ಕೊಂಡ ವಿದ್ಯಾರ್ಥಿಗಳು, ನಮ್ಮ ಗುರುತು ಹಾಗೂ ಶಿಕ್ಷಣದ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಅವರು ಇದ್ದಕ್ಕಿದ್ದಂತೆ ಯಾಕೆ ನಿರೀಕ್ಷಿಸಬೇಕು? ಇದು ನ್ಯಾಯವಲ್ಲ' ಎಂದು ಆಲಿಯಾ ಹೇಳಿ ದ್ದಾರೆ. ಕೆಲವು ತಿಂಗಳಲ್ಲಿ ಪರೀಕ್ಷೆ ನಡೆಯ ಲಿದೆ. ಪಾಠಗಳು ತಪ್ಪಿ ಹೋಗುವುದರಿಂದ ನಮ್ಮ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಅಲ್ದಾಸ್ ಹೇಳಿದ್ದಾರೆ.
“ನಮ್ಮ ಹಾಜರಾತಿ ಕೂಡ ಕಡಿಮೆಯಾಗು ಇದೆ. ನಾವು ಮುಖ್ಯವಾದ ಪಾಠಗಳನ್ನು ತಪ್ಪಿಸಿ ಕೊಳ್ಳುತ್ತಿದ್ದೇವೆ. ಇನ್ನು ಕೆಲವೇ ತಿಂಗಳಲ್ಲಿ ಪರೀಕ್ಷೆ ಬರಲಿದೆ. ಇನ್ನು ಮುಂದೆ ಏನು ನಡೆಯುತ್ತದೆ ಎಂಬ ಬಗ್ಗೆ ನಾವು ಆತಂಕಿತವಾಗಿದ್ದೇವೆ' ಎಂದು ಅಲ್ಮಾಸ್ ಹೇಳಿದ್ದಾರೆ.