ಹಣಹೂಡಿಕೆಯಲ್ಲಿ ಹೆಚ್ಚಿನ ಲಾಭದ ಆಮೀಷ; ಕೋಟ್ಯಾಂತರ ರೂ ವಂಚಿಸಿದ ಫ್ಲೂಲೆಸ್ ಕಂಪನಿ ಜನರಿಂದ ಹೆದರಿ ಪೊಲೀಸ್ ಸಹಾಯ ಪಡೆದ ವಂಚಕ

Source: sonews | By Staff Correspondent | Published on 8th December 2018, 6:37 PM | Coastal News | State News | Don't Miss |

ಭಟ್ಕಳ: ಸಾರ್ವಜನಕರನ್ನು ವಂಚಿಸುವ ಜಾಲಗಳು ದಿನದಿನಕ್ಕೆ ಹೆಚ್ಚಾಗುತ್ತಿದ್ದು ಹೆಚ್ಚಿನ ಹಣದ ಆಮಿಷ ತೋರಿಸಿ ಕೋಟ್ಯಾಂತರ ರೂ ವಂಚಸಿರುವ ಹಲವಾರು ಪ್ರಕರಣಗಳು ಬೆಳಕಿಗೆ ಬಂದರೂ ಕಾನೂನಿನ ರಕ್ಷಣೆಯಲ್ಲಿ ವಂಚಕರು ಐಶಾರಮಿ ಜೀವನ ನಡೆಸುತ್ತಿದ್ದು ವಿದೇಶಕ್ಕೆ ಹೋಗಿ ತಲೆಮರೆಸಿಕೊಂಡು ಅಲ್ಲಿ ವಿಲಾಸಿ ಜೀವನ ನಡೆಸುತ್ತಿದ್ದು ಇತ್ತ ಹೆಚ್ಚು ಗಳಿಸುವ ಉದ್ದೇಶದಿಂದ ನಕಲಿ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಇಂಗು ತಿಂದ ಮಂಗನಂತಾಗಿರು ಜನರು ವಂಚಕ ತಮ್ಮ ಕಣ್ಣ ಮುಂದೆ ಸಿಕ್ಕರೆ ಸುಮ್ಮನೆ ಬಿಡುವರೆ?
ಇಲ್ಲ ಖಂಡಿತ ಇಲ್ಲ. ಅವನನ್ನು ಅಟ್ಟಾಡಿಸಿ ಹೊಡೆದು ತಮ್ಮ ರೋಷವನ್ನು ಹೊರಚೆಲ್ಲುತ್ತಾರೆ. 

ಇಂತಹದ್ದೊಂದು ಘಟನೆ ಭಟ್ಕಳದಲ್ಲಿ ಶುಕ್ರವಾರ ನಡೆದ ಕುರಿತಂತೆ ತಡವಾಗಿ ಬೆಳಕಿಗೆ ಬಂದಿದ್ದು ಫ್ಲೋಲೆಸ್ ಎಂಬ ಹಣ ಹೂಡಿಕೆಯ ವಂಚಕ ಕಂಪನಿಯನ್ನು ತೆರೆದು ಜನರನ್ನು ಕೋಟ್ಯಾಂತರ ರೂ ಟೋಪ್ಪಿ ಹಾಕಿ ವಿದೇಶದಲ್ಲಿ ವಿಲಾಸಿ ಜೀವನ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಅಕಸ್ಮಿಕವಾಗಿ ಭಟ್ಕಳದ ಜನರ ಕಣ್ಣಿಗೆ ಕಾಣಿಸಿಕೊಂಡಿದ್ದು ಆತನನ್ನು ಹಿಂಬಾಲಿಸಿದ ನೂರಾರು ಮಂದಿಯನ್ನು ಕಂಡು ತನ್ನ ಜೀವ ಉಳಿಸಿಕೊಳ್ಳಲು ಪೊಲೀಸ್ ಠಾಣೆ ಹೊಳಹೊಕ್ಕು ಅವರಿಂದ ರಕ್ಷಣೆ ಪಡೆದ ಸುದ್ದಿ ಇಲ್ಲಿ ಹರಿದಾಡುತ್ತಿದೆ. 

ವಂಚಕ ಕಂಪನಿ ಫ್ಲೋಲೆಸ್ ನ ಸ್ಥಾಪಕರಲ್ಲೊಬ್ಬ ಎಂದು ಹೇಳಲಾದ ವ್ಯಕ್ತಿಯು  ಕಳೆದೆರಡು ದಿನಗಳ ಹಿಂದೆ ವಿದೇಶದಿಂದ ಬಂದಿರುವ ಕುರಿತು ಮಾಹಿತಿ ಇತ್ತು ಎನ್ನಲಾಗಿದೆ. ಇದನ್ನೇ ಹೊಂಚು ಹಾಕುತ್ತಿರುವವರಿಗೆ ಶುಕ್ರವಾರ ಸಂಜೆ ಆತನು ಬೇರೊಬ್ಬರ ಕಾರಿನಲ್ಲಿ ವೇಗವಾಗಿ ಹೋಗುತ್ತಿರುವುದನ್ನು ಕಂಡು ನಿಲ್ಲಿಸಲು ಸೂಚಿಸಿದರೂ ಕೂಡಾ ನಿಲ್ಲಿಸದೇ ಪರಾರಿಯಾಲು ನೋಡಿದ್ದು ನಂತರ ಹೆದರಿ ಕಾರನ್ನು ಭಟ್ಕಳ ನಗರ ಠಾಣೆಯತ್ತ ತಿರುಗಿಸಿದರು ಎನ್ನಲಾಗಿದೆ. 

ಕಂಪೆನಿಯು ಈಗಾಗಲೇ ಬಡ್ಡಿ ನೀಡುವುದನ್ನು ನಿಲ್ಲಿಸಿದ್ದರಿಂದ ಸಾವಿರಕ್ಕೂ ಹೆಚ್ಚು ಜನರು ತೀವ್ರ ತೊಂದರೆಗೊಳಗಾಗಿದ್ದು ಇದ್ದ ಹಣವನ್ನೆಲ್ಲಾ ಬಡ್ಡಿ ಆಸೆಗಾಗಿ ತೊಡಗಿಸಿಕೊಂಡಿದ್ದು ಜೀವನ ನಡೆಸುವುದೇ ಕಷ್ಟವಾಗಿತ್ತು. ಅಲ್ಲದೇ ಹಲವಾರು ಮಹಿಳೆಯರು, ಮನೆಯಲ್ಲಿ ತಿಳಿಯದೇ ತಾವೇ ಲಾಭದಾಸೆಗೆ ಹಣ ಹೂಡಿಕೆ ಮಾಡಿದ್ದರಿಂದ ಪತಿ ಪತ್ನಿ ಬೇರಾಗುವ ಸಂಭವ ಕೂಡಾ ಇತ್ತು ಎನ್ನಲಾಗಿದೆ. ಜನತೆ ಇವರ ಬರುವಿಕೆಯನ್ನೇ ಕಾಯುತ್ತಿದ್ದು ಸುದ್ದಿ ತಿಳಿದ ತಕ್ಷಣ ಮಹಿಳೆಯರೂ ಸೇರಿದಂತೆ ನೂರಾರು ಜನರು ಪೊಲೀಸ್ ಠಾಣೆಯ ಎದುರು ಜಮಾಯಿಸಿ, ತೀವ್ರ ತರಾಟೆಗೆ ತೆಗೆದುಕೊಂಡರು. ಪೊಲೀಸರಿಗೆ ಜನರನ್ನು ನಿಯಂತ್ರಿಸುವುದೇ ಕಷ್ಟಕರವಾಗಿ ಪರಿಣಮಿಸಿತ್ತು. 

ಭಟ್ಕಳದವನೇ ಆಗಿರುವ ವಂಚಕ ವ್ಯಕ್ತಿಯ ಪಾಲುದಾರಿಕೆಯಲ್ಲಿ ಫ್ಲೋಲೆಸ್ ಎನ್ನುವ ಕಂಪೆನಿಯನ್ನು ತೆರೆದಿದ್ದು ಕಂಪೆನಿಯಲ್ಲಿ ತನಗೆ ಮೋಸ ಮಾಡಲಾಗಿದೆ ಎನ್ನುವ ಕಥೆ ಕಟ್ಟುತ್ತಿದ್ದಾರೆ. ಠಾಣೆಯಲ್ಲಿ ತನ್ನ ಪಾಲುದಾರರಾದ ಅಬ್ದುಲ್ ರಶೀದ್ ಮತ್ತು ರಮೇಶ ಎನ್ನುವವರು ಮೋಸ ಮಾಡಿದ್ದು ಹಣವನ್ನು ದುಬೈನಲ್ಲಿ ಹೂಡಿಕೆ ಮಾಡುವುದಾಗಿ ತೆಗೆದುಕೊಂಡಿದ್ದಾರೆನ್ನುತ್ತಿದ್ದಾನೆ.  

ಫ್ಲೋಲೆಸ್ ಎನ್ನುವ ಕಂಪೆನಿಯನ್ನು ತೆರೆದು ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿದವರಿಗೆ ಶೇ.18 ರಿಂದ ಶೇ.30ರ ತನಕ ಲಾಭಾಂಶ ಕೊಡುತ್ತೇವೆಂದು ಪ್ರಚಾರ ಗಿಟ್ಟಿಸಿಕೊಂಡಿದ್ದ ಕಂಪೆನಿ ಕೋಟ್ಯಂತರ ರೂಪಾಯಿ ಹಣವನ್ನು ಭಟ್ಕಳ ತಾಲೂಕೊಂದರಿಂದಲೇ ಸಂಗ್ರಹಿಸಿದೆ. ಭಟ್ಕಳದಲ್ಲಿನ ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಸಹಕಾರಿ ಬ್ಯಾಂಕುಗಳು ತಮ್ಮ ಬ್ಯಾಂಕಿನ ಗ್ರಾಹಕರು ಒಂದೇ ಸವನೆ ಹಣ ತೆಗೆಯುತ್ತಿರುವುದನ್ನು ನೋಡಿ ಗಾಬರಿಗೊಂಡು ವಿಚಾರಿಸುತ್ತಿರುವಾಗ ಕಂಪೆನಿಗಳು ಹುಟ್ಟಿಕೊಂಡು ದುಪ್ಪಟ್ಟು ಬಡ್ಡಿಕೊಡುವ ಕುರಿತು ತಿಳಿದು ಬಂದಿತ್ತು. ಆಗಲೇ ತಮ್ಮ ಗ್ರಾಹಕರಿಗೆ ಬ್ಯಾಂಕ್ ಅಧಿಕಾರಿಗಳು ತಿಳಿ ಹೇಳಿದ್ದರೂ ಸಹ ಅವರ ಮಾತಿಗೆ ಬೆಲೆಕೊಡದೇ ಬ್ಯಾಂಕ್ ಡಿಪಾಜಿಟ್ ಮಾತ್ರವಲ್ಲ, ಮನೆಯಲ್ಲಿದ್ದ ಚಿನ್ನ, ಬೆಲೆಬಾಳುವ ವಸ್ತುಗಳನ್ನು ಮಾರಾಟ ಮಾಡಿದ್ದಲ್ಲೇ ಹಲವರು ವಾಸ್ತವ್ಯದ ಮನೆಯನ್ನು ಅಡವಿಟ್ಟು ಹಣ ತುಂಬಿದ್ದರು. ಒಂದು ಲಕ್ಷದಿಂದ ಒಂದು ಕೋಟಿ ತನಕ ತುಂಬಿದ ವ್ಯಕ್ತಿಗಳಿದ್ದು ಅವರು ಇಂದು ಕಂಗಾಲಾಗಿದ್ದಾರೆ. ಹಲವು ಮಹಿಳೆಯರು ತಮ್ಮ ಗಂಡನಿಗೆ ತಿಳಿಯದಂತೆ ಲಾಭ ಮಾಡಲು ಹೋಗಿ ತೀವ್ರ ಸಂಕಷ್ಟಕ್ಕೊಳಗಾಗಿದ್ದಲ್ಲದೇ ಕೆಲವರು ಗಂಡನನ್ನೇ ಕಳೆದುಕೊಂಡ ಉದಾಹರಣೆಯೂ ಇದೆ ಎನ್ನುತ್ತಾರೆ ಭಟ್ಕಳದ ಜನತೆ. ಒಟ್ಟಾರೆ ಭಟ್ಕಳದ ಜನತೆಗೆ ಮಕ್‍ಮಲ್ ಟೋಪಿಯನ್ನು ಹಾಕಿದ ಇವರನ್ನು ಕಾನೂನು ಎನು ಮಾಡುತ್ತದೆ ಎಂದು ಕಾದು ನೋಡಬೇಕಾಗಿದೆ. 

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...