ವಿದ್ಯುತ್ ಶಾಕ್: ಹೆಸ್ಕಾಂ ದಿನಗೂಲಿ ನೌಕರ ಸಾವು
ಯಲ್ಲಾಪುರ: ತಾಲೂಕಿನ ಮಳವಳ್ಳಿಯಲ್ಲಿ ವಿದ್ಯುತ್ ಕಂಬ ಹತ್ತಿ ಕೆಲಸ ಮಾಡುವಾಗ ಆಕಸ್ಮಿಕ ವಿದ್ಯುತ್ ಸ್ಪರ್ಶ ತಗುಲಿ ಗಾಯಗೊಂಡಿದ್ದ ಹೆಸ್ಕಾಂ ಉಪವಿಭಾಗದ ದಿನಗೂಲಿ ನೌಕರ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಸವಣೂರು ಹೂವಿನಸಿಗ್ಲಿ ನಿವಾಸಿ, ಅನಿಲ ನಿಂಗಪ್ಪ ದೇವಗಿರಿ (22) ಮೃತಪಟ್ಟ ದುರ್ದೈವಿ. ಈತ ಮಂಗಳವಾರ ಸಂಜೆ ನಾಲ್ಕು ಗಂಟೆಯ ಸುಮಾರು ಮಳವಳ್ಳಿಯ ವಿದ್ಯುತ್ ಕಂಪನಿ ವಿದ್ಯುತ್ ದುರಸ್ತಿಗೊಳಿಸುತ್ತಿರುವಾಗ ಆಕಸ್ಮಿಕವಾಗಿ ಹರಿದ ವಿದ್ಯುತ್ತಿನಿಂದಾಗಿ ಗಾಯಗೊಂಡವನನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತಪಟ್ಟಿದ್ದಾನೆ. ಯಲ್ಲಾಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೆÇಲೀಸರು ತನಿಖೆ ಕೈಗೊಂಡಿದ್ದಾರೆ.