ಶಿರಸಿ: ಮೇ 28 ರಂದು ಹೆಸ್ಕಾಂ ಗ್ರಾಹಕರ ಸಭೆ
ಕಾರವಾರ : ಶಿರಸಿ ವೃತ್ತದ ಹು.ವಿ.ಸ.ಕಂ.ನಿ.ಯ ಹೆಸ್ಕಾಂ ಗ್ರಾಹಕರ ಅದಾಲತ್ ಕುಂದುಕೊರತೆ ಸಭೆಯನ್ನು ಮೇ 28 ರಂದು ಬೆಳಗ್ಗೆ 11 ಅಧೀಕ್ಷಕ ಇಂಜಿನೀಯರ(ವಿ), ಕಾರ್ಯ ಮತ್ತು ಪಾಲನಾ ವೃತ್ತ, ಅಯ್ಯಪ್ಪ ನಗರ, ಹುಬ್ಬಳ್ಳಿ ರಸ್ತೆ ಶಿರಶಿ ರವರ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಸಮಸ್ಯೆ ನಿವೇದಿಸಿಕೊಳ್ಳಬಯಸುವ ಗ್ರಾಹಕರು ತಮ್ಮ ಕುಂದು ಕೊರತೆಯನ್ನು ಅರ್ಜಿ ನಮೂನೆ- ಂ ಯಲ್ಲಿ ಮತ್ತು ಲಿಖಿತವಾಗಿ ಗ್ರಾಹಕರು ಹೆಸರು, ಆರ್.ಆರ್ ನಂಬರ, ವಿಳಾಸ ಮತ್ತು ಮೊಬೈಲ್ ಸಂಖೈಗಳೊಂದಿಗೆ ವಿವರಗಳನ್ನು ಸಲ್ಲಿಸಬೇಕು.
ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ವಿದ್ಯುತ್ ಸಂಬಂದಿತ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಉತ್ತರ ಕನ್ನಡ ಜಿಲ್ಲಾ ಗ್ರಾಹಕರ ಕುಂದುಕೊರತೆ ನಿವಾರಣಾ ವೇದಿಕೆ ಹಾಗೂ ಅಧೀಕ್ಷಕ ಇಂಜಿನೀಯರ (ವಿ), ಕಾರ್ಯ ಮತ್ತು ಪಾಲನಾ ವೃತ್ತ ಹೆಸ್ಕಾಂ ಶಿರಶಿ ಹೆಸ್ಕಾಂ ವಿನಂತಿಸಿದ್ದಾರೆ.