ಭಟ್ಕಳ: ಭಟ್ಕಳದಲ್ಲಿ ಮಂಗಳವಾರ ಭಾರಿ ಬಿರುಗಾಳಿಯಿಂದ ಕೂಡಿದ ಮಳೆಯಾಗುತ್ತಿದ್ದು ಜನ ಜೀವನ ಅಸ್ತವ್ಯಸ್ಥಗೊಂಡಿದೆ.
ಇಂದಿನ ಮಳೆ ಬಿರುಗಾಳಿಗೆ ನಾಲ್ಕೈದು ಬೃಹತ್ ಮರಗಳು ಧರೆಗೆ ಉರುಳಿದ್ದು ವಿದ್ಯುತ್ ದೀಪ, ಟ್ರಾನ್ಸಫಾರಂಗಳು ಕೂಡ ಹಾನಿಯಾಗಿವೆ.
ಈ ಕುರಿತು ಹೆಸ್ಕಾಂ ಇಲಾಖೆಯ ಸಹಾಯಕ ಇಂಜಿನೀಯರ್ ಮಂಜುನಾಥ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು ಒಟ್ಟು 2 ಟ್ರಾನ್ಸಫಾರಮರ್ಸ್ ಮತ್ತು 16 ವಿದ್ಯುತ್ ಕಂಬಗಳು ಹಾನಿಯಾಗಿದ್ದು ಒಟ್ಟು ಅಂದಾಜು ರೂ.5.1 ಲಕ್ಷ ಹಾನಿ ಸಂಭವಿಸಿದೆ ಎಂದಿದ್ದಾರೆ.