ಹಾಸನ:ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ, ಮತದಾರರ ಪಟ್ಟಿ ಪರಿಷ್ಕರಣೆಯ ವೀಕ್ಷಕರಾದ ರಾಜೇಂದ್ರ ಕುಮಾರ್ ಕಠಾರಿಯಾ ಅವರು ಹಾಸನ ನಗರದ ವಿವಿಧ ಬಡಾವಣೆಗಳಿಗೆ ತೆರಳಿ ಮತದಾರರಿಂದ ಮಾಹಿತಿ ಪಡೆದರು.
ಮತದಾರ ನೋಂದಣಿ ಕುರಿತಂತೆ ಎರಡನೇ ವಿಶೇಷ ಪರಿಶೀಲನೆ ಸಂಬಂಧವಾಗಿ ಮತಗಟ್ಟೆಗಳಿಗೆ ಖುದ್ದು ಭೇಟಿ ನೀಡಿದ ಅವರು ಮತಪಟ್ಟಿಗೆ ಸೇರ್ಪಡೆಯಾದ ಮತ್ತು ಮತಪಟ್ಟಿಯಿಂದ ನಿಯಮಾನುಸಾರ ಕೈಬಿಡಲಾದ ಹಾಗೂ ನಮೂನೆ 8ರನ್ವಯ ವರ್ಗಾವಣೆಯಾದ ಮತದಾರರ ಪಟ್ಟಿಯನ್ನು ಮತದಾರರ ವಾಸಸ್ಥಳಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮತದಾರ ಪಟ್ಟಿ ಪರಿಶೀಲನೆಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ ಕುಟುಂಬಸ್ಥರಿಗೆ ಕಠಾರಿಯಾ ಅವರು ಹೂಗುಚ್ಛ ನೀಡಿ ಅಭಿನಂದಿಸಿದರು.
ಜಿಲ್ಲಾಧಿಕಾರಿ ಆರ್. ಗಿರೀಶ್, ಅಪರ ಜಿಲ್ಲಾಧಿಕಾರಿ ಕವಿತಾ ರಾಜರಾಂ, ಉಪವಿಭಾಗಾಧಿಕಾರಿ ಡಾ|| ನವೀನ್ ಭಟ್ ಅವರು ಮತದಾರ ಪಟ್ಟಿಯ ಪರಿಶೀಲಿಸಿದರು. ತಹಶೀಲ್ದಾರ್ ಶಿವಶಂಕರಪ್ಪ ಅವರು ಸ್ಥಳದಲ್ಲಿ ಹಾಜರಿದ್ದರು.