ಹೊಸದಿಲ್ಲಿ: ಜ್ಞಾನವಾಪಿ ಮಸೀದಿಯ ಒಳಗಡೆ ಆರಾಧಿಸುವುದಕ್ಕೆ ಸಂಬಂಧಿಸಿ ಹಿಂದೂ ಭಕ್ತರು ಸಲ್ಲಿಸಿದ ಸಿವಿಲ್ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಾರಣಾಸಿ ಜಿಲ್ಲಾ ನ್ಯಾಯಾ ಲಯಕ್ಕೆ ವರ್ಗಾಯಿಸಿದೆ.
ಪ್ರಕರಣದ ಸಂಕೀರ್ಣತೆ ಹಾಗೂ ಸೂಕ್ಷ್ಮತೆಯನ್ನು ಗಮನದಲ್ಲಿ ಇರಿಸಿಕೊಂಡು ಈ ನಿರ್ಧಾರ ತೆಗೆದು ಕೊಳ್ಳಲಾಗಿದೆ. ಈ ಪ್ರಕರಣವನ್ನು ಹಿರಿಯ ಹಾಗೂ ಅನುಭವಿ ನ್ಯಾಯಾಂಗ ಅಧಿಕಾರಿ ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವಾರಣಾಸಿಯ ಜನಪ್ರಿಯ ಕಾಶಿ ವಿಶ್ವನಾಥ ದೇವಾಲಯದ ಸಮೀಪ ಇರುವ ಜ್ಞಾನವಾಪಿ ಮಸೀದಿ ಸಂಕೀರ್ಣದ ವೀಡಿಯೊ ಸರ್ವೇಗೆ ವಾರಣಾಸಿ ನ್ಯಾಯಾಲಯ ನೀಡಿರುವ ಆದೇಶದ ವಿರುದ್ಧ ಅಂಜುಮನ್ ಇಂತೆಝಾಮಿಯಾ ಮಸೀದಿ ಸಮಿತಿ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಿಚಾರಣೆ ನಡೆಸಿತು.
ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ, ಸೂರ್ಯಕಾಂತ್ ಹಾಗೂ ಪಿ.ಎಸ್. ನರಸಿಂಹ ಅವರನ್ನು ಒಳಗೊಂಡ ಪೀಠ, ಇದು ಈ ಹಿಂದೆ ವಿಚಾರಣೆ ನಡೆಸಿದ ಸಿವಿಲ್ ನ್ಯಾಯಾಧೀಶರ ಬಗ್ಗೆ ಯಾವುದೇ ರೀತಿಯ ಸಂಶಯ ವ್ಯಕ್ತಪಡಿಸುತ್ತಿರು ವುದು ಅಲ್ಲ ಎಂದು ಹೇಳಿತು. ಮಸೀದಿ ಸಮಿತಿ ಸಲ್ಲಿಸಿದ ಮನವಿಯನ್ನು ಸಿಪಿಸಿ (ಸ್ವೀಕಾರಾರ್ಹ ಕುರಿತು) ಯ ನಿಯಮ 11ರ ಆದೇಶ 7ರ ಅಡಿ ಯಲ್ಲಿ ಮೊದಲು ನಿರ್ಧರಿಸಿ ಎಂದು ಜಿಲ್ಲಾ ನ್ಯಾಯಾ ಧೀಶರಿಗೆ ನಿರ್ದೇಶಿಸಿತು.
ಆದರೆ, ಶಿವಲಿಂಗ ಇದೆಯೆಂದು ಹೇಳಲಾದ ಪ್ರದೇಶದ ರಕ್ಷಣೆ ಹಾಗೂ ಮಸೀದಿ ಸಂಕೀರ್ಣದ ಆವರಣದಲ್ಲಿ ಮುಸ್ಲಿಮರಿಗೆ ನಮಾರ ಮಾಡಲು ಅವಕಾಶ ನೀಡುವಂತೆ ಮೇ 17 ರಂದು ನೀಡಿದ ಮಧ್ಯಂತರ ಆದೇಶ ಪ್ರಕರಣ ನಿರ್ಧಾರವಾಗುವ ವರೆಗೆ ಅಸ್ತಿತ್ವದಲ್ಲಿ ಇರಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತು.
ನೊಂದಿರುವ ಕಕ್ಷಿಗಾರರು ಉಚ್ಚ ನ್ಯಾಯಾಲ ಯವನ್ನು ಸಂಪರ್ಕಿಸಲು 8 ವಾರಗಳ ಕಾಲಾವಕಾಶ ವಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿತು. ಈ ಪ್ರಕರಣದಲ್ಲಿ ಭಾಗಿಯಾಗಿರುವವರೊಂದಿಗೆ ಸಮಾಲೋಚನೆ ನಡೆಸಿ ಮಸೀದಿ ಸಂಕೀರ್ಣದ ಒಳಗೆ ನಮಾಝ್ ಸಲ್ಲಿಸಲು 'ವರ'ಗೆ ಸಾಕಷ್ಟು ವ್ಯವಸ್ಥೆ ಕಲ್ಪಿಸುವಂತೆ ಪೀಠ ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ನಿರ್ದೇಶಿಸಿದೆ.
ಹಿಂದೂ ಗುಂಪು ಸಲ್ಲಿಸಿದ ಅರ್ಜಿ ಸ್ವೀಕಾರಾರ್ಹ ವಲ್ಲ ಎಂದು ಮಸೀದಿ ಸಮಿತಿ ಸಲ್ಲಿಸಿದ ಮನವಿ ಕುರಿತು ಜಿಲ್ಲಾ ನ್ಯಾಯಾಧೀಶರು ನಿರ್ಧರಿಸಲಿದ್ದಾರೆ. ಅಲ್ಲಿವರೆಗೆ 'ಶಿವಲಿಂಗ' ಪ್ರದೇಶಕ್ಕೆ ರಕ್ಷಣೆ ನೀಡುವ ಹಾಗೂ ಮುಸ್ಲಿಮರು ನಮಾಝ್ ನೆರವೇರಿಸಲು ಮುಕ್ತ ಅವಕಾಶ ನೀಡುವ ಮಧ್ಯಂತರ ಆದೇಶ ಮುಂದುವರಿಯಲಿದೆ ಎಂದು ಕೋರ್ಟ್ ತಿಳಿಸಿದೆ.
ಈ ಪ್ರಕರಣವನ್ನು ಹೆಚ್ಚು ಅನುಭವಿ ಹಾಗೂ ಪ್ರಬುದ್ಧ ನ್ಯಾಯಾಧೀಶರು ವಿಚಾರಣೆ ನಡೆಸ ಬೇಕು. ನಾವು ವಿಚಾರಣಾ ನ್ಯಾಯಾಲಯದ ನ್ಯಾಯಾ ಧೀಶರ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿ ರುವುದು ಅಲ್ಲ. ಆದರೆ, ಹೆಚ್ಚು ಅನುಭವಿ ನ್ಯಾಯಾಧೀಶರು ಈ ಪ್ರಕರಣದ ವಿಚಾರಣೆ ನಡೆಸಬೇಕು. ಇದರಿಂದ ಎರಡೂ ಕಡೆಯವರಿಗೆ ಪ್ರಯೋಜನವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಿಸಿತು.