ಭಟ್ಕಳ: ನಗರದಲ್ಲಿ ಹಲವು ಕಡೆಗಳಲ್ಲಿ ಹುಚ್ಚು ನಾಯಿ ಹಾವಳಿ ಆರಂಭವಾಗಿದ್ದು ಬುಧವಾರ ಒಂದೇ ದಿನ ಮೂವರಿಗೆ ಕಚ್ಚಿದೆ ಎನ್ನಲಾಗಿದೆ. ಪುರಸಭಾ ವ್ಯಾಪ್ತಿಯ ಕಿದ್ವಾಯಿ ರಸ್ತೆ, ಹಳೇ ಬಸ್ ನಿಲ್ದಾಣ, ಪಟ್ಟಣದ ಪುರಸಭೆ ವ್ಯಾಪ್ತಿಯ ಕಿದ್ವಾಯಿ ರಸ್ತೆ, ಮುಖ್ಯ ರಸ್ತೆ, ಪುರಸಭೆ ಕಟ್ಟಡದ ಬಳಿಯಲ್ಲಿ ಹುಚ್ಚು ನಾಯಿಗಳ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರು ತಿರುಗಾಡುವದು ದುಸ್ತರವಾಗಿದೆ. ಈಗಾಗಲೆ 3ಕ್ಕೂ ಅಧಿಕ ಮಂದಿಗೆ ನಾಯಿ ಕಡಿತಕೊಳಕ್ಕಾಗಿ ಆಸ್ಪತ್ರೆ ಸೇರಿದ ಘಟನೆ ಬುಧವಾರ ಸಂಭವಿಸಿದೆ.
ನಗರಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೆÇಲೀಸ್ ಸಿಬ್ಬಂದಿ, ಆಸರಕೇರಿ ನಿವಾಸಿ 40 ವರ್ಷದ ಮಹಿಳೆ, ಗುಳ್ಮಿಯ ವ್ಯಕ್ತಿಯೋರ್ವರು ಸೇರಿ ಒಂದೇ ಬಾರಿಗೆ ಮೂವರಿಗೆ ಕಚ್ಚಿ ನಾಯಿ ಪರಾರಿಯಾಗಿದೆ. ಮೂವರೂ ಕೂಡಾ ಇಲ್ಲಿನ ತಾಲೂಕಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮರಳಿದ್ದಾರೆ. ಹುಚ್ಚು ನಾಯಿ ಜನರನ್ನು ಕಂಡೊಡನೆಯೇ ಅವರ ಮೈಮೇಲೆ ಹಾಕಿ ಕಚ್ಚಿ ಪರಾರಿಯಾಗುತ್ತಿದ್ದು ತಕ್ಷಣ ಅದನ್ನು ಹಿಡಿಯಲು ಪೌರ ಕಾರ್ಮಿಕರು ಪ್ರಯತ್ನಿಸಿದರಾದರೂ ತಪ್ಪಿಸಿಕೊಂಡು ಪರಾರಿಯಾಗಿದೆ.
ಪುರಸಭಾ ವ್ಯಾಪ್ತಿಯಲ್ಲಿ ಒಂದು ಹುಚ್ಚು ನಾಯಿ ಕೆಲವರಿಗೆ ಕಚ್ಚಿ ಗಾಯಗೊಳಿಸಿದ ಕುರಿತು ತಿಳಿದು ಬಂದ ತಕ್ಷಣ ಅದನ್ನು ಹಿಡಿಯಲು ನುರಿತ ಪೌರ ಕಾರ್ಮಿಕರು ಶ್ರಮಿಸುತ್ತಿದ್ದಾರೆ. ಆದರೆ ಅದು ಸಿಕ್ಕ ಸಿಕ್ಕಲ್ಲಿ ಓಡುತ್ತಿರುವುದರಿಂದ ಕಷ್ಟವಾಗುತ್ತಿದೆ. ಯಾರೂ ಕೂಡಾ ಹೆದರುವ ಅಗತ್ಯವಿಲ್ಲ, ಅದನ್ನು ಹಿಡಿದು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ.
-ಸುಜಯಾ ಸೋಮನ್, ಪುರಸಭೆಯ ಹಿರಿಯ ಆರೋಗ್ಯಾಧಿಕಾರಿ.