ಪದವೀಧರ ಕ್ಷೇತ್ರ ಚುನಾವಣೆ. ಅಕ್ಟೋಬರ್ 26 ರಿಂದ 28ರವರೆಗೆ ಮದ್ಯ ಮಾರಾಟ ಹಾಗೂ ಸಾಗಾಟ ನಿಷೇಧ

Source: SO News | By Laxmi Tanaya | Published on 25th October 2020, 1:30 PM | State News |

ಕಾರವಾರ :  ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ   ಅಕ್ಟೋಬರ್ 28 ರಂದು ಜಿಲ್ಲೆಯಲ್ಲಿ ಮತದಾನ ನಡೆಯಲಿದೆ. 

 ಚುನಾವಣಾ  ಸಮಯದಲ್ಲಿ ಜಿಲ್ಲೆಯಲ್ಲಿ  ಯಾವುದೇ  ರೀತಿಯ  ಅಹಿತಕರ ಘಟನೆಗಳಿಗೆ  ಅವಕಾಶವಾಗದಂತೆ  ಅಕ್ಟೋಬರ್ 26ರ ಸಾಯಂಕಾಲ 5 ಗಂಟೆಯಿಂದ ಅಕ್ಟೋಬರ್ 28ರ ಮಧ್ಯರಾತ್ರಿ 12 ಗಂಟೆವರೆಗೆ ಜಿಲ್ಲೆಯಾದ್ಯಂತ ಮದ್ಯಮಾರಾಟ, ಸಾಗಾಣಿಕೆ ಹಾಗೂ ಸಂಗ್ರಹಣೆ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯಾದ  ಡಾ.  ಹರೀಶ ಕುಮಾರ ಕೆ  ಅವರು ಆದೇಶ ಹೊರಡಿಸಿದ್ದಾರೆ.

    ನಿಷೇಧಿತ ದಿನಗಳನ್ನು ಶುಷ್ಕ ದಿವಸಗಳೆಂದು ಘೋಷಿಸಲಾಗಿರುತ್ತದೆ. ಈ  ಅವಧಿಯಲ್ಲಿ  ಯಾರಾದರೂ  ಮದ್ಯವನ್ನು  ಸ್ವಾಧೀನದಲ್ಲಿಟ್ಟುಕೊಂಡಿರುವುದು  ಅಥವಾ  ಮದ್ಯವನ್ನು  ಸೇವಿಸಿ ಸಾರ್ವಜನಿಕರಿಗೆ  ಉಪದ್ರವ,  ಬೀದಿ  ರಂಪಾಟ  ಮಾಡುತ್ತಿರುವುದು  ಕಂಡು ಬಂದಲ್ಲಿ   ಮುನ್ನೆಚ್ಚರಿಕೆ  ಕ್ರಮವಾಗಿ  ಚುನಾವಣೆ  ಮುಕ್ತಾಯವಾಗುವವರೆಗೂ  ಅವರನ್ನು  ಕಸ್ಟಡಿಯಲ್ಲಿ ಇಡತಕ್ಕದ್ದು  ಎಂದು  ಅವರು  ಆದೇಶದಲ್ಲಿ  ತಿಳಿಸಿದ್ದಾರೆ.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!