ಕಾರವಾರ : ಏಷ್ಯಾದ ಅತಿ ದೊಡ್ಡ ನೌಕಾನೆಲೆ ಕಾರವಾರದಲ್ಲಿ ಶನಿವಾರ ನೌಕಾ ದಿನಾಚರಣೆ ನಡೆಸಲಾಯಿತು.
ಬಿಣಗಾದ ಕದಂಬ ನೌಕಾನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಪಾಲರು, ನೌಸೇನಾ ಬಲಿಷ್ಠ ದೃಷ್ಡಿಯಿಂದ ನೇವಲ್ ಥಿಯೇಟರ್ ಕಮಾಂಡ್ ಪ್ರಾರಂಭಿಸುವ ಯೋಜನೆ ನಡೆಯುತ್ತಿದೆ. ಮಾಡುವ ಯೋಜನೆ ನಡೆಯುತ್ತಿದ್ದು, ಇದರಿಂದ ನೌಕಾ ಸೇನೆ ಇನ್ನಷ್ಟು ಬಲಿಷ್ಠವಾಗಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ಅವರ ಮುತುವರ್ಜಿಯಿಂದ ಸೀಬರ್ಡ್ ಎರಡನೇ ಹಂತದ ಯೋಜನೆ ನಡೆಯುತ್ತಿದೆ. ಈ ಯೋಜನೆ ಪೂರ್ಣಗೊಂಡ ಬಳಿಕ ಕದಂಬ ನೌಕಾನೆಲೆ ಏಷ್ಯಾದ ಅತಿದೊಡ್ಡ ನೌಕಾ ನೆಲೆ ಆಗಲಿದೆ. 1971 ರಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಜಯಗಳಿಸುವಲ್ಲಿ ಭಾರತೀಯ ನೌಕಾ ಸೇನೆ ಮುಖ್ಯ ಪಾತ್ರ ನಿರ್ವಹಿಸಿದ್ದು, ಕರ್ನಾಟಕದ ರಕ್ಷಣೆಯಲ್ಲಿಯೂ ನೌಕಾ ಸೇನೆ ಮಹತ್ವದ ಕೆಲಸ ಮಾಡಿದೆ ಎಂದು ಪ್ರಶಂಸಿಸಿದರು.
ಕರ್ನಾಟಕದ ನೌಕಾ ವಲಯದ ಮುಖ್ಯಸ್ಥ ರಿಯರ್ ಅಡ್ಮಿರಲ್ ಮಹೇಶ ಸಿಂಗ್ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ನೌಕಾ ಸೇನೆಯ ಬ್ಯಾಂಡ್ ಪ್ರದರ್ಶಿಸುವ ಮೂಲಕ ಹುತಾತ್ಮರ ಸ್ಮರಣೆ ಮಾಡಿಕೊಳ್ಳಲಾಯಿತು. ಕದಂಬ ನೌಕಾನೆಲೆಯ ಶಿಫ್ ಯಾರ್ಡ್ ಮುಖ್ಯಸ್ಥ ರಿಯರ್ ಅಡ್ಮಿರಲ್ ದೀಪಕ ಕುಮಾರ ಗೋಸ್ವಾಮಿ, ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸೇರಿದಂತೆ ಇತರರು ಹಾಜರಿದ್ದರು.