ಯಲ್ಲಾಪುರ ತಹಶೀಲ್ದಾರ ಹುದ್ದೆಯ ಹೆಚ್ಚುವರಿ ಪ್ರಭಾರಿಯಾಗಿ ಗಣಪತಿ ಶಾಸ್ತ್ರೀ
ಕಾರವಾರ : ಕುಮಟಾ ಸಹಾಯಕ ಕಮೀಷನರ್ ಕಚೇರಿಯ ಗ್ರೇಡ್-2 ತಹಶೀಲ್ದಾರ ಗಣಪತಿ ಶಾಸ್ತ್ರೀ ಇವರನ್ನು ಅಗಸ್ಟ್ 6 ರಿಂದ ಮುಂದಿನ ಆದೇಶದವರೆಗೆ ಯಲ್ಲಾಪುರ ತಹಶೀಲ್ದಾರ ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ವಹಿಸಿ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಅವರು ಆದೇಶಿಸಿರುತ್ತಾರೆ.
ಯಲ್ಲಾಪುರ ತಹಶೀಲ್ದಾರ ಹುದ್ದೆಯಲ್ಲಿದ್ದಂತಹ ದಿನಮಣಿ ಜಿ ಹೆಗಡೆ ಅವರು ವಯೋನಿವೃತ್ತಿಯಾದ ಪ್ರಯುಕ್ತ ಮುಂಡಗೋಡ ತಹಶೀಲ್ದಾರ ಶ್ರೀಧರ ಎಸ್ ಮುಂದಲಮನಿ ಇವರನ್ನು ಯಲ್ಲಾಪುರ ತಹಶೀಲ್ದಾರ ಹುದ್ದೆಯ ಹೆಚ್ಚುವರಿ ಪ್ರಭಾರದಲ್ಲಿ ಇರಿಸಿ ಆದೇಶಿಸಲಾಗಿತ್ತು. ಆದರೆ ಮುಂಡಗೋಡ ಹಾಗೂ ಯಲ್ಲಾಪುರ ತಾಲೂಕಿನಲ್ಲಿ ಕೋವಿಡ್-19 ಹರಡುವಿಕೆ ಹಾಗೂ ಜಿಲ್ಲೆಯಲ್ಲಿ ಮುಂಗಾರು ಮಳೆ ಹೆಚ್ಚಿನ ಪ್ರಮಾಣದಲ್ಲಿ ಉಂಟಾಗಿ, ಪ್ರವಾಹ ಸ್ಥಿತಿ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುಂಡಗೋಡ ತಹಶೀಲ್ದಾರ ಎರಡೂ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುವುದು ಕಷ್ಟವಾಗುವುದೆಂದು ಮನಗಂಡು ಆಡಳಿತದÀ ಹಿತದೃಷ್ಠಿಯಿಂದ ಜಿಲ್ಲಾಧಿಕಾರಿಯವರು ಕುಮಟಾ ಸಹಾಯಕ ಆಯುಕ್ತರ ಕಚೇರಿಯ ಗ್ರೇಡ್-2 ತಹಶೀಲ್ದಾರರಿಗೆ, ಯಲ್ಲಾಪುರ ತಹಶೀಲ್ದಾರ ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ವಹಿಸಿರುತ್ತಾರೆ.