ಮೊಹರ್ರಮ್ ನಿಮಿತ್ತ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

Source: sonews | By Staff Correspondent | Published on 10th September 2019, 10:37 PM | Coastal News |

ಭಟ್ಕಳ: ಅನ್ಯಾಯದ ವಿರುದ್ಧ ಹೋರಾಡಿ ಹುತಾತ್ಮರಾದ ಹಝರತ್ ಇಮಾಮ್ ಹುಸೇನ್ ರ ಸ್ಮರಣಾರ್ಥ ಮೊಹರಂ ತಿಂಗಳ 10ನೇ ದಿನದಂದು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಇಲ್ಲಿನ ಸಮಾಜಸೇವಕ ಹಾಗೂ ಪುರಸಭೆ ಸದಸ್ಯ ಫಯಾಝ್ ಮುಲ್ಲಾ ಸರ್ಕಾರಿ ಆಸ್ಪತ್ರೆಯ ಹೊರರೋಗಿಗಳಿಗೆ ಹಣ್ಣುಹಂಪಲು, ಬ್ರೆಡ್, ಮತ್ತು ಗ್ಲುಕೋಸ್ ಪೊಟ್ಟಣವನ್ನು ವಿತರಿಸಿದರು. 

ಕಾರ್ಯಕ್ರಮದಲ್ಲಿ ಭಟ್ಕಳ ಉಪವಿಭಾಗದ  ಸಹಾಯಕ ಆಯುಕ್ತ ಸಾಜಿದ್ ಮುಲ್ಲಾ, ಭಟ್ಕಳ ಪೊಲೀಸ್ ಇನ್ಸೆಸ್ಪೆಕ್ಟರ್ ರಾಮಚಂದ್ರ ನಾಯಕ, ಹಾಗೂ ಬುರ್ಹಾನ್ ಕಾಕಮೊಹಿದ್ದೀನ್(ಕೊಕಾರಿ) ಸಾಥ್ ನೀಡಿ ರೋಗಿಗಳಿಗೆ ಹಣ್ಣು ವಿತರಿಸಿದರು. 

ಈ ಸಂದರ್ಭದಲ್ಲಿ ಮುಹಮ್ಮದ್ ಯಾಹ್ಯಾ ಮುಲ್ಲಾ, ಐ.ಎಂ.ಇರ್ಷಾದ್ ಡಾಟಾ, ಮುಹಮ್ಮದ್ ಸಾದಿಕ್ ನಾಯಿತೆ, ಮುಹಮ್ಮದ್ ಮಸೂದ್ ಶಿಂಗೇರಿ, ಅಬ್ದುಲ್ ರಷೀದ್ ಶಾಬಂದ್ರಿ, ಮುಹಮ್ಮದ್ ಅಶ್ಫಾಖ್ ತಾಹಿರಾ ಮುಂತಾದವರು ಹಾಜರಿದ್ದರು. 
 

Read These Next